ಮೂಡುಬಿದಿರೆ: ರಾಷ್ಟ್ರಮಟ್ಟದ ಜೆ.ಇ.ಇ ಅಡ್ವಾನ್ಸ್ ಪ್ರವೇಶ ಪರೀಕ್ಷೆಯಲ್ಲಿ ಮೂಡುಬಿದಿರೆ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ವಿಘ್ನೇಶ್ ಹರೀಶ್ ನಾಯಕ್ ಇವರು ರಾಷ್ಟ್ರಮಟ್ಟದಲ್ಲಿ 574ನೇ ರ್ಯಾಂಕ್ ಹಾಗೂ ಸುಮುಕ್ ಎಸ್. ಕೆ 2376ನೇ ರ್ಯಾಂಕ್(EWS) ಪಡೆದಿದ್ದಾರೆ. 
ಸಾಧಕ ವಿದ್ಯಾರ್ಥಿಗಳನ್ನು ಎಕ್ಸಲೆಂಟ್ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಜೆ.ಇ.ಇ ಸಂಯೋಜಕ ರಾಮಮೂರ್ತಿ, ಡಾ. ದಯಾನಂದ್, ಶೈಲೇಶ್ ಶೆಟ್ಟಿ ಆಭಿನಂದಿಸಿದ್ದಾರೆ.
