ಶುಕ್ರವಾರದಂದು ಮೂಡುಬಿದಿರೆ ಪೊಲೀಸ್ ವೃತ್ತ ನಿರೀಕ್ಷಕ ದಿನೇಶ್ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಮನೆಯ ಬೀಗ ಒಡೆದು ಒಳ ಪ್ರವೇಶಿಸಿ ನೋಡಿದಾಗ ಕೊಣೆಯ ನೆಲದ ಮೇಲೆ ಕುತ್ತಿಗೆಯಿಂದ ರುಂಡ ಬೇರೆಯಾಗಿರುವ ಮೃತ ದೇಹವಿದ್ದು ಮನೆಯ ಜಂತಿಯಲ್ಲಿ ನೇಣಿಗೆ ಉಪಯೋಗಿಸಲು ಕಟ್ಟಿದ ಸೀರೆಯು ಪತ್ತೆಯಾಗಿದೆ.ಹೆಂಡತಿ ಮತ್ತು ಇಬ್ಬರು ಮಕ್ಕಳು ಕಳೆದ ಮೂರು ವರ್ಷಗಳ ಹಿಂದೆಯೆ ಕಾರಣಾಂತರದಿಂದ ಗೋಕುಲು ಅವರ ಸಂಪರ್ಕದಿಂದ ಬೇರೆಯಾಗಿ ಬೆಳಗಾಂವಿನಲ್ಲಿದ್ದರು. ಕಳೆದ ಒಂದೂವರೆ ವರ್ಷಗಳವರೆಗೆ ಆಗೊಮ್ಮೆ ಈಗೊಮ್ಮೆ ಹೆಂಡ್ತಿ ಮಕ್ಕಳೊಂದಿಗೆ ಫೋನ್ ಕರೆಯಲ್ಲಿದ್ದ ಅವರು ನಂತರ ಸಂಪೂರ್ಣ ಮಾತು ಬಿಟ್ಟಿದ್ದಾರೆಂದು ತಿಳಿದು ಬಂದಿದೆ.

