ಮುಂಬಯಿ : ಕೋವಿಡ್ ೧೯ ಎಂಬ ಸಾಂಕ್ರಾಮಿಕ ಕಾಯಿಲೆಯಿಂದ ಸೋಂಕಿತ ರೋಗಿಗಳ ಸಿಟಿ ಸ್ಕ್ಯಾನ್ ಪರೀಕ್ಷೆಯನ್ನು ಲೋನಾವಾಲಾ ಮುನ್ಸಿಪಲ್ ಕೌನ್ಸಿಲ್‌ನ ಅಧೀನದಲ್ಲಿರುವ ಲೋನಾವಾಲಾ ರೋಗನಿರ್ಣಯ ಕೇಂದ್ರದಲ್ಲಿ ನಡೆಸಲಾಗುತ್ತಿದ್ದು, ಸಿಟಿ ಸ್ಕ್ಯಾನ್‌ಗೆ ಸರ್ಕಾರ ಒಂದು ಮೊತ್ತವನ್ನು ನಿಗದಿಪಡಿಸಿ ಅದಕ್ಕೆ ಅನುಗುಣವಾಗಿ ಆದೇಶ ಹೊರಡಿಸಿತ್ತು. ಆದರೆ ಈ ಆದೇಶ ಧಿಕ್ಕರಿಸಿ ಲೋನಾವಾಲಾ ಡಯಾಗ್ನೋಸ್ಟಿಕ್ ಸೆಂಟರ್ ಸಿಟಿ ಸ್ಕಾ ್ಯನ್ ಪರೀಕ್ಷೆಯ ಸೋಗಿನಲ್ಲಿ ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ಸುಲಿಗೆ ಮಾಡುವ ಮೂಲಕ ರೋಗಿಗಳನ್ನು ವಂಚಿಸುತ್ತಿತ್ತು. ನಾಗರಿಕರ ಅನೇಕ ರೋಗಿಗಳ ದೂರುಗಳನ್ನು ಪಡೆದ ಲೋನಾವಾಲಾ ಇಲ್ಲಿನ ಬಿಜೆಪಿ ಧುರೀಣ, ಲೋನವಲಾ ನಗರ ಪರಿಷತ್‌ನ ಉಪಾಧ್ಯಕ್ಷ ನಿಟ್ಟೆ ನಡಿಮನೆ ಶ್ರೀಧರ್ ಎಸ್.ಪೂಜಾರಿ (ಕಾರ್ಕಳ) ಇದನ್ನು ತೀವ್ರವಾಗಿ ತರಾಟೆಗೆ ತೆಗೆದು ಕೊಂಡು ವಂಚನೆಗೆ ಒಳಪಟ್ಟ ಅಮಾಯಕರಿಗೆ ಹೆಚ್ಚುವರಿ ಮೊತ್ತ ಹಿಂತಿರುಗಿಸುವಲ್ಲಿ ಸಫಲರಾಗಿದ್ದಾರೆ.Lonavala Shridhar 1Aದೂರುಗಳನ್ನು ಸ್ವೀಕರಿಸಿದ ಶ್ರೀಧರ್ ಪೂಜಾರಿ ಅವರು ಲೋನಾವಾಲಾ ಡಯಾಗ್ನೋಸ್ಟಿಕ್ ಸೆಂಟರ್ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಪ್ರಕಾರ, ಡಯಾಗ್ನೋಸ್ಟಿಕ್ ಸೆಂಟರ್ ಸುಮಾರು ೧೦೦ ಜನರ ಹಣವನ್ನು ಸುಮಾರು ರೂಪಾಯಿ ೩.೦೦ ಲಕ್ಷ ಮೊತ್ತವನ್ನು ಹಿಂತಿರುಗಿಸುವಲ್ಲಿ ಯಶಕಂಡಿದ್ದಾರೆ. ಸಿಟಿ ಸ್ಕಾ ್ಯನಿಂಗ್ ಹೆಸರಿನಲ್ಲಿ ನಾಗರಿಕರಿಂದ ನಿಗದಿತ ಮೊತ್ತಕ್ಕಿಂತ ಹೆಚ್ಚಿನ ದರವನ್ನು ತೆಗೆದುಕೊಂಡ ಡಯಾಗ್ನೋಸ್ಟಿಕ್ ಸೆಂಟರ್ ಸಿಟಿ ಸ್ಕಾ ್ಯನ್ ಮಾಡಿಸಿಕೊಂಡ ಜನರಿಗೆ ಸ್ಪಂದಿಸಿ ನಾಗರಿಕರ ಹಣ ಮರಳಿಸಿದೆ. ಕೋವಿಡ್ ಸಂಕಷ್ಟದ ಭೀಕರ ಕಾಲದಲ್ಲಿ ಒಪ್ಪೊತ್ತಿಗೆ ಊಟದ ವ್ಯವಸ್ಥೆಗೂ ಪರದಾಡುತ್ತಿರುವ ತಮಗೆ ಸಕಾಲದಲ್ಲಿ ಸೂಕ್ತ ನ್ಯಾಯ ಒದಗಿಸಿಕೊಟ್ಟ ಶ್ರೀಧರ್ ಪೂಜಾರಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.Lonavala Shridhar 2A

By Suddi9

Leave a Reply

Your email address will not be published. Required fields are marked *