ವಿಟ್ಲ : ಚಂದಳಿಕೆ ಬೆಂಕಿ ಅವಘಡದಿಂದ ಸಂಪೂರ್ಣ ಸುಟ್ಟು ಹೋದ ಆಶೀರ್ವಾದ ಗ್ಯಾರೇಜ್ ಮಾಲಕ ಹರೀಶ್ ರವರಿಗೆ ದ ಕ ಗ್ಯಾರೇಜ್ ಮಾಲಕರ ಸಂಘ ಬೆಳ್ತಂಗಡಿ ವಲಯದವರು ೫೫,೦೦೦ ಧನ ಸಹಾಯ ನೀಡಿದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ವಲಯದ ಅಧ್ಯಕ್ಷ ಪೂವಪ್ಪ ಗೌಡ, ಮಾಜಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ ಜಗದೀಶ ಕುಲಾಲ್, ಕೋಶಾಧಿಕಾರಿ ಪದ್ಮನಾಭ ಕುಲಾಲ್, ಗೌರವ ಸಲಹೆಗಾರ ಪುರಂದರ ಹೆಗ್ಡೆ, ಉಪಾಧ್ಯಕ್ಷ ಮಧುಕರ ಉಜಿರೆ ಹಾಗೂ ಸದಸ್ಯರು, ಕೇಂದ್ರ ಸಮಿತಿಯ ಅಧ್ಯಕ್ಷ ದಿನೇಶ್ ಕುಮಾರ್, ಚೆಯರ್ಮ್ಯಾನ್ ಜನಾರ್ಧನ ಎ, ದಿನೇಶ್ ಬಂಗೇರ, ವಿಟ್ಲ ವಲಯದ ಅಧ್ಯಕ್ಷ ಬಾಬು ಬಿ ಕೆ, ಮಾಜಿ ಅಧ್ಯಕ್ಷ ಲಕ್ಷ್ಮಣ ಪೂಜಾರಿ, ಸಂಚಾಲಕ ಉಮ್ಮರ್, ಕೋಶಾಧಿಕಾರಿ ಲಿಯೋ ಲಸ್ರಾದೊ, ಜತೆಕಾರ್ಯದರ್ಶಿ ರೋಹಿನಾಥ, ಲೆಕ್ಕಪರಿಶೋದಕ ಪಡಾರು ಚಂದ್ರಶೇಖರ ಭಟ್ ಮತ್ತು ಇತರ ಸದಸ್ಯರು ಉಪಸ್ಥಿತರಿದ್ದರು.

