ಸುದ್ದಿ9ಕೈಕಂಬ:ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಕೈಕಂಬ ಶಾಖೆಯಲ್ಲಿ ಅ.15 ಬುಧವಾರ ಪ್ರಧಾನಮಂತ್ರಿಯ ಜನ್ ಧನ್ ಯೋಜನೆಯಲ್ಲಿ ಏಕೌಂಟ್ ಮಾಡಿದವರಿಗೆ ರೂಪೈ ಕಾರ್ಡ್ ವಿತರಿಸಲಾಯಿತು. ಜನ್ ಧನ್ ಏಕೌಂಟ್ ಮೊದಲ ಗ್ರಾಹಕ ಮಹಮ್ಮದ್ ಇಕ್ಬಾಲ್ ಮೊಗರು ಇವರಿಗೆ ಬ್ಯಾಂಕಿನ ಶಾಖಾ ಪ್ರಬಂಧಕ ರಿಷಿ ದುಬೈ ಇವರು ರೂಪೆ ಕಾರ್ಡ್ ವಿತರಿಸಿದರು. ಹಾಗೂ ಬ್ಯಾಂಕಿನ ಅಸಿಸ್ಟೆಂಟ್ ಮ್ಯಾನೇಜರ್ ಸಾವಿತ್ರಿ ಕೆ. ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.




