ಬಂಟ್ವಾಳ: ಮಾಜಿ ಸಚಿವ ಬಿ. ರಮಾನಾಥ ರೈಯವರು ವೈಯಕ್ತಿಕ ನೆಲೆಯಲ್ಲಿ ಧನ ಸಹಾಯದೊಂದಿಗೆ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ 44 ಗ್ರಾಮ ಪಂಚಾಯತ್ ಮತ್ತು 27 ಪುರಸಭಾ ವಾರ್ಡ್ ಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಹಕಾರದಿಂದ ಬಡ ಕುಟುಂಬವನ್ನು ಗುರುತಿಸಿ ಅಕ್ಕಿ ಮತ್ತು ದಿನ ಬಳಕೆಯ ಸಾಮಗ್ರಿಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ರಾಯಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕಿಟ್ ಹಾಗೂ ಧನಸಹಾಯ ವಿತರಿಸುವ ಮೂಲಕ ಮಾಜಿ ಬಿ. ರಮಾನಾಥ ರೈ ಅವರು ಚಾಲನೆ ನೀಡಿದರು.ಈ ಸಂದರ್ಭ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿಕುಂದರ್,ತಾಪಂ ಸ್ಥಾಯಿಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ,ಪುರಸಭಾ ಸದಸ್ಯ ವಾಸುಪೂಜಾರಿ,ಜಗದೀಶ್ ಕೊಯಿಲ ಮಾದಲಾದವರಿದ್ದರು.
