ಬಂಟ್ವಾಳ : ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಮಂಗಳವಾರ ಬಂಟ್ವಾಳ ಪೇಟೆಯಲ್ಲಿರುವ ರೇಶನ್ ಅಂಗಡಿಗಳಿಗೆ ಭೇಟಿ ಪಡಿತರ ವಿತರಣೆ ಮತ್ತು ಅಕ್ಕಿಯ ಗುಣಮಟ್ಟದ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಅಲ್ಲಿ ಸೇರಿದ್ದ ನಾಗರಿಕರಿಗೆ ಸಾಮಾಜಿಕ ಅಂತರವನ್ನು ಕಾಯ್ದಕೊಂಡು ಸರತಿಯಲ್ಲಿ ನಿಲ್ಲುವಂತೆ ಮನವಿ ಮಾಡಿದರು.
ಇದೇ ವೇಳೆ ರೇಷನ್ ಅಂಗಡಿಗೆ ಗೋಧಿ ಪೂರೈಕೆಯಾಗದ ಬಗ್ಗೆ ಶಾಸಕರ ಗಮನಸೆಳೆಯಲಾಯಿತು.ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದೇವದಾಸ ಶೆಟ್ಟಿ, ಬಂಟ್ವಾಳ ವ್ಯ ಸೇ.ಸ.ಸಂಘದ ನಿರ್ದೇಶಕ ಬಸ್ತಿ ಸದಾಶಿವ ಶೆಣ್ಯೆ,ಸುದರ್ಶನ್ ಬಜ ಶಾಸಕರ ಜೊತೆಗಿದ್ದರು.
