ಬಂಟ್ವಾಳ: ಇಲ್ಲಿನ ನಾವೂರು ಅಗ್ರಹಾರ ಶ್ರೀಗೋಪಾಲಕೃಷ್ಣ ದೇವಸ್ಥಾನದಲ್ಲಿ ಪೂರ್ವಶಿಷ್ಠ ಸಂಪ್ರದಾಯದಂತೆ ವರ್ಷಾವಧಿ ಉತ್ಸವವು ವಿವಿಧ ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಫೆ.3 ರಂದು ನಡೆಯಲಿದೆ ಎಂದು ದೇವಳದ ಅರ್ಚಕ ವೇ.ಮೂ.ಸುದರ್ಶನ್ ಬಲ್ಲಾಳ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಅಂದು ಬೆಳಿಗ್ಗೆ ವಿವಿಧ ವೈಧಿಕ ವಿಧಿವಿಧಾನಗಳು ನಡೆಯಲಿದ್ದು,ಮಧ್ಯಾಹ್ನ ಮಹಾಸಭೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯುವುದು,ರಾತ್ರಿ ಶ್ರೀಗೋಪಾಲಕೃಷ್ಣದೇವರಿಗೆ ರಂಗಪೂಜೆ, ದೇವರ ಬಲಿಉತ್ಸವ,ಮಂತ್ರಾಕ್ಷತೆಯೊಂದಿಗೆ ಮಂಗಲವಾಗಲಿದೆ.ನಂತರ ಸಾಂಸ್ಖೃತಿಕ ಕಾರ್ಯಕ್ರಮದ ಅಂಗವಾಗಿ ತುಳು ನಾಟಕ ನಡೆಯುವುದು ಎಂದು ಪ್ರಕಟಣೆ ತಿಳುಸಿದೆ.

By suddi9

Leave a Reply

Your email address will not be published. Required fields are marked *