ಕೈಕಂಬ:ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ದಿ.ಶ್ರೀಮತಿ ಮತ್ತು ಶ್ರೀ.ಕೆ. ಚಂದಪ್ಪ ಪೂಜಾರಿ ಇವರ ಸ್ಮರಣಾರ್ಥವಾಗಿ ಜ.25ರಂದು ಶನಿವಾರ ಕೈಕಂಬದಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ.
ಸಂಜೆ 6ಕ್ಕೆ ದಂಡಿ ಮೆರವಣಿಗೆಯಲ್ಲಿ ಚೌಕಿ ಮಂಟಪಕ್ಕೆ ಶ್ರೀ ದೇವರ ಆಗಮನ 6.30ಕ್ಕೆ ಭಜನಾ ಕಾರ್ಯಕ್ರಮ.8.30ಕ್ಕೆ ಚೌಕಿ ಪೂಜೆ. 8.30ರಿಂದ ಅನ್ನಸಂತರ್ಪಣೆ ನಡೆಯಲಿದೆ ಎಂದು ಶ್ರೀಮತಿ ಮತ್ತು ಶ್ರಿ.ಕೆ.ಲೋಕೇಶ್ ಸಹೋದರರು-ಸಹೋದರಿಯರು ತಿಳಿಸಿದ್ದಾರೆ.

