ಹೊಸ ತಂತ್ರಜ್ಞಾನ ವನ್ನು ತೋಟಗಾರಿಕಾ ಇಲಾಖೆಯವರು ಸಾಮಾನ್ಯ ರೈತರಿಗೆ ತಿಳಿಸುವ ಕೆಲಸ ಮಾಡಬೇಕಾಗಿದೆ. ರೈತರಿಗೆ ಸಹಾಯಧನದ ಜೊತೆಜೊತೆಯಾಗಿ, ವಿದೇಶಿ ಮಾದರಿಯಲ್ಲಿ ಅತ್ಯಂತ ಅಧುನಿಕ ತಂತ್ರಜ್ಞಾನ ಗಳ ಮೂಲಕ ಕೃಷಿ ಮಾಡುವ ಬಗ್ಗೆ ತರಬೇತಿ ಪಡೆದು ಮಾಹಿತಿ ನೀಡಬೇಕು ಎಂದು ಅವರು ತಿಳಿಸಿದರು. ಪ್ರತಿ ರೈತರು ಜೇನು ವ್ಯವಸಾಯ ಮಾಡಿದಾಗ ಪರಾಗಸ್ಪರ್ಶದಿಂದ ಇತರ ಮಿಶ್ರಕೃಷಿಯಲ್ಲಿ ಅತ್ಯಂತ ಉತ್ತಮ ಇಳುವರಿಯನ್ನು ಪಡೆಯಬಹುದು. ನೈಸರ್ಗಿಕ ಸಂಪನ್ಮೂಲಗಳ ಬಳಸಿ ಜೇನು ಕೃಷಿ ವ್ಯವಸಾಯದಲ್ಲಿ ಲಾಭಾಂಶ ಪಡೆಯಬಹುದು. ದೊಡ್ಡ ರೈತರ ಜೇನು ಕೃಷಿಯ ಮೂಲಕ ಜೇನು ಉತ್ಪಾದನೆ ಹೆಚ್ಚು ಮಾಡಿದಾಗ ಕೆ.ಎಂ.ಎಪ್ ಮೂಲಕ ಮಾರುಕಟ್ಟೆಯ ನ್ನು ಮಾಡಲು ಸಾಧ್ಯವಾಗುತ್ತದೆ. ಜೇನು ಕೃಷಿಕೆ ಉತ್ತಮ ಮಾರುಕಟ್ಟೆ ಇರುವುದರಿಂದ ಗುಣಮಟ್ಟದ ಜೇನು ವ್ಯವಸಾಯ ಮಾಡಲು ಅವರು ಕೃಷಿಕರಿಗೆ ತಿಳಿಸಿದರು.

ಕಾರ್ಯಕ್ರಮ ವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಮಾತನಾಡಿ, ದ.ಕ.ಜಿಲ್ಲೆಯಲ್ಲಿ ಮೂಲ ಕೃಷಿಯ ಜೊತೆ ಮಿಶ್ರ ಬೆಳೆ ಬೆಳೆದಾಗ ಮಾತ್ರ ಕೃಷಿಯಲ್ಲಿ ಆರ್ಥಿಕ ವಾಗಿ ಸದೃಡರಾಗಲು ಸಾಧ್ಯ ಎಂದು ಚಂದ್ರಹಾಸ ಕರ್ಕೇರ ಹೇಳಿದರು. ಕೃಷಿ ಪ್ರಧಾನವಾಗಿ ರುವ ಜಿಲ್ಲೆಯಲ್ಲಿ ಹೊಸ ಯಾಂತ್ರೀಕೃತ ಮಾದರಿಯ ಕೃಷಿಯ ಮಾಹಿತಿಯ ಕೊರತೆ ಇದೆ. ಸರಕಾರ ಇಂತಹ ಯೋಜನೆಗಳ ಮೂಲಕ ಮಾಹಿತಿ ನೀಡಿದಾಗ ಕೃಷಿಯಲ್ಲಿ ಮಹತ್ತರವಾದ ಸಾಧನೆ ಮಾಡಲು ಸಾಧ್ಯ ಎಂದು ಅವರು ಹೇಳಿದರು. ಸರಕಾರದ ಯೋಜನೆಗಳ ಮಾಹಿತಿ ಗಳು ಸರಿಯಾದ ರೀತಿಯಲ್ಲಿ ಕೃಷಿಕರಿಗೆ ತಲುಪಿದಾಗ ಮಾತ್ರ ಕೃಷಿಯಲ್ಲಿ ಬದಲಾವಣೆ ಸಾಧ್ಯ, ಹೊಸ ಮಾದರಿಯಲ್ಲಿ ಲಾಭದಾಯಕ ಕೃಷಿಯ ಮೂಲಕ ಯಶಸ್ಸು ಗಳಿಸಲು ಸಾಧ್ಯವಾಗಬಹುದು ಎಂದು ಅವರು ಹೇಳಿದರು.
ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಅಲಿ ಮಾತನಾಡಿ ಜೇನು ಕೃಷಿ ಅನೇಕ ರೈತರಿಗೆ ಜೀವನಾಧಾರ ಅಗಿದೆ. ಕೃಷಿಕರ ಅರ್ಥಿಕ ವ್ಯವಸ್ಥೆಯಲ್ಲಿ ಪ್ರಧಾನ ಕೃಷಿಯಾಗಿರುವ ಜೇನು ಕೃಷಿಗೆ ಸರಕಾರ ಅನೇಕ ಸವಲತ್ತುಗಳನ್ನು ನೀಡುತ್ತಿದ್ದು , ವ್ಯವಸಾಯ ಮಾಡುವ ಕೃಷಿಕರು ಇದರ ಪ್ರಯೋಜನ ಪಡೆಯುವಂತೆ ಅವರು ತಿಳಿಸಿದರು. ತಾ.ಪಂ.ಇ.ಒ.ರಾಜಣ್ಣ ಕಾರ್ಯಕ್ರಮ ಕ್ಕೆ ಶುಭಹಾರೈಸಿದ ಅವರು ತಾ.ಪಂ.ಅನುದಾನವನ್ನು ಬಳಸಿಕೊಂಡು ಜೇನು ಕೃಷಿಯ ಬಗ್ಗೆ ಮಾಹಿತಿ ಕಾರ್ಯಾಗಾರ ಗಳನ್ನು ನಡೆಸಿದರೆ ಉತ್ತಮ ಎಂದು ಹೇಳಿದರು.
