ಉಡುಪಿ :- ಮಕ್ಕಳೊಂದಿಗೆ ಸೇರಿ ಹಬ್ಬಗಳನ್ನು ಆಚರಿಸುದರಲ್ಲಿ ಸಿಗುವ ಆನಂದ ಎಷ್ಟೆ ಹಣ ನೀಡಿದರೂ ಸಿಗಲು ಅಸಾಧ್ಯ ಎಂದು ಜಿಲ್ಲಾ ಅಂಗವಿಕಲ ಮತ್ತು ಹಿರಿಯ ನಾಗರಿಕ ಕಲ್ಯಾಣಾಧಿಕಾರಿ ಗಣೀಶ್ ಮರಾಠ ಹೇಳಿದರು.
ಅವರು ಹೋo ಡಾಕ್ಟರ್ಸ್ ಫ್oಡೇಶನ್ ವತಿಯಿoದ ಅಂಪಾರು ವಾಗ್ಜ್ಯೋತಿ ಶ್ರವಣ ದೋಷ ಹೊಂದಿದ ಮಕ್ಕಳ ಶಾಲೆಯಲ್ಲಿ ಅ.26 ಆದಿತ್ಯವಾರ ನಡೆದ ದೀಪಾವಳಿ ಸಂಭ್ರಮ ಕಾಯ೯ಕ್ರಮದಲ್ಲಿ ಮಾತನಾಡಿದರು.ಶಾಲಾ ಮುಖ್ಯ ಶಿಕ್ಷಕ ರವೀಂದ್ರ ಎನ್ ಶುಭ ಹಾರೈಸಿದರು. ಸಂಸ್ಥೆಯ ಮುಂದಾಳು ಡಾII ಶಶಿಕಿರಣ್ ಶೆಟ್ಟಿ ಪ್ರಸ್ತಾವನೆಗೈದರು.ಈ ಸಂದಭ೯ದಲ್ಲಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ , ಶಾಲೆಗೆ ವಿವಿಧ ವಸ್ತುಗಳ ಕೊಡುಗೆ, ಪ್ರತಿಭಾ ಪ್ರದಶ೯ನ, ಸಹ ಭೋಜನ ಕಾಯ೯ಕ್ರಮ ನಡೆಯಿತು.ಕಾಯ೯ಕ್ರಮದಲ್ಲಿ ಡಾII ಸುಮಾ ಶೆಟ್ಟಿ, ಬಂಗಾರಪ್ಪ, ಸವಿತಾ ಶೆಟ್ಟಿ, ಶಶಿ, ಸಂಸ್ಥೆಯ ಸದಸ್ಯರು ಭಾಗವಹಿಸಿದ್ದರು.ರಾಘವೇಂದ್ರ ಕವಾ೯ಲು ನಿರೂಪಿಸಿ, ವಂದಿಸಿದರು