ಬಂಟ್ವಾಳ: ಬಿ.ಸಿ.ರೋಡ್ ನ ಕ.ಇ.ಬಿ ಯಿಂದ ಅಲೆತ್ತೂರುವರೆಗಿನ ಶಾಸಕರ ನಿಧಿ15 ಲಕ್ಷ ರೂ.ವೆಚ್ಚದ ಅನುದಾನದಲ್ಲಿ ಕಾಂಕ್ರೀಟೀಕರಣಗೊಂಡ ನೂತನ ರಸ್ತೆಯನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭಾನುವಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಶಾಸಕರು ಬಿ.ಸಿ.ರೋಡನ್ನು ಸುಂದರೀಕರಣಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ನೀಲನಕ್ಷೆ ಸಿದ್ದವಾಗಿದ್ದು,ಅ.21ರಂದು ಇದರ ಕಾಮಗಾರಿಗೂ ಚಾಲನೆ ನೀಡಲಾಗುತ್ತಿದೆ.
ಅಭಿವೃದ್ದಿ ಕಾರ್ಯಗಳಿಗೆ ಸಾರ್ವಜನಿಕರ ಸಹಭಾಗಿತ್ವವು ಅಗತ್ಯವಿದ್ದು,ಈ ದೆಸೆಯಲ್ಲಿ ಎಲ್ಲರು ಸಹಕರಿಸುವಂತೆ ಕೋರಿದರು. ಈ ಸಂದರ್ಭದಲ್ಲಿ ಪುರಸಭಾಸದಸ್ಯ ಗೋವಿಂದ ಪ್ರಭು,ಬಿಜೆಪಿ ಅಧ್ಯಕ್ಷರಾದ ದೇವದಾಸ ಶೆಟ್ಟಿ,ಮಾಜಿ ಸದಸ್ಯೆ ಸುಗುಣ ಕಿಣಿ,ಮಚ್ಚೆಂದ್ರ ಸಾಲ್ಯಾನ್,ಸುರೇಶ್ ಟೈಲರ್,ದುರ್ಗದಾಸ್, ಶಾಂತರಾಮ್,ಅನಂತಕೃಷ್ಣ, ಪ್ರದೀಪ್ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.
