ಪೊಳಲಿ : ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಸೆ.5ರಂದು ಗುರುವಾರ ತೆನೆಹಬ್ಬ ಆಚರಿಸಲಾಯ್ತು. ಈ ಆಚರಣೆ ದೇವಸ್ಥಾನದ ಸಂಪ್ರದಾಯದಲ್ಲಿ ವಿಶಿಷ್ಠವಾಗಿದ್ದು, ಹಲವಾರು ಸಂಪ್ರದಾಯ, ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವಂತೆ. ವೈದಿಕ ಆಚರಣೆ ಹಾಗೂ ತುಳುನಾಡು ಸಂಪ್ರದಾಯಕ್ಕೆ ಒಂದಕ್ಕೊಂದು ಕೊಂಡಿಯಾಗಿ ಆಚರಿಸಲ್ಪಟ್ಟ ಈ ಆಚರಣೆಯನ್ನು ಪೆÇಳಲಿಯಲ್ಲಿ ಶತಶತಮಾನಗಳ ಕಾಲಗಳಿಂದಲೂ ಆಚರಿಸಲ್ಪಡುತ್ತಿದ್ದು. ಪೊಳಲಿಯಲ್ಲಿ ಊರವರೇ ಸೇರಿ ಬೆಳೆಸಿದ ತರಕಾರಿಯೊಂದಿಗೆ ಹೊಸಕ್ಕಿಯ ಊಟ ಹಾಗೂ ಹೊಸ ಬೆಳ್ತಿಗೆ ಅಕ್ಕಿಯ ಪಾಯಸ ಮಾಡಿ ದೇವರಿಗೆ ಅರ್ಪಿಸಿ ಪೂಜೆ ನೆರವೇರಿದ ಬಳಿಕ ಅನ್ನ ಪ್ರಸಾದ ಭಕ್ತರಿಗೆ ನೀಡಲಾಗುವುದು . ತೆನೆಗಳನ್ನು ಪೊಳಲಿ ಸಮೀಪದ ಅಖಿಲೇಶ್ವರ ದೇವಸ್ಥಾನದ ಭಾಸ್ಕರ ಎಂಬವರ ಗದ್ದೆಯಿಂದ ತೆನೆಗಳನ್ನು ತಂದು ದೇವಸ್ಥಾನದ ಪ್ರಾಂಗಣದ ಮುಂದೆ ಇಡಲಾಗುತ್ತದೆ. ನಂತರ ಇದನ್ನು ದೇವಸ್ಥಾನದ ಪಾದಾರ್ಥಿಯೊಬ್ಬರು ಅದನ್ನು ತಲೆಯ ಮೇಲೆ ಇಟ್ಟು ದೇವಸ್ಥಾನದ ಕೊಡಿಮರದ ಬುಡದಲ್ಲಿ ತಂದು ಇಡುತ್ತಾರೆ.


ಆ ಬಳಿಕ ದೇವಳದ ಅರ್ಚಕರು ಬಂದು ಅದಕ್ಕೆ ವೈದಿಕ ರೀತಿಯಲ್ಲಿ ಪೂಜೆ ಸಲ್ಲಿಸುತ್ತಾರೆ. ನಂತರ ದೇವಸ್ಥಾನಕ್ಕೆ ಬಲಿ ಸೇವೆ ಮಾಡುವ ವಾಸುದೇವ ಮಯ್ಯ ಅವರು ತೆನೆಯನ್ನು ತಲೆಯ ಮೇಲೆ ಹೊತ್ತುಕೊಂಡು ಒಂದು ಸುತ್ತು ಬಲಿಸೇವೆ ನಡೆಯುತ್ತದೆ. ಈವೇಳೆ ಚೆಂಡವಾದನ, ಟಾಸೆ, ವಾದ್ಯಗೋಷ್ಠಿಯೊಂದಿಗೆ ದೇವಸ್ಥಾನದ ಹೊರಾಂಗಣದಲ್ಲಿ ಒಂದು ಸುತ್ತು ಬಲಿ ಸೇವೆ ನಡೆಯುತ್ತದೆ. ಇದಕ್ಕೆ ದೇವಸ್ಥಾನದ ಅರ್ಚಕ ವೃಂದದವರು ಆಡಳಿತ ಮೊಕ್ತೇಸರರು, ಗುತ್ತಿನವರು,ಸೇರಿದ ಸಾವಿರ ಸೀಮೆಯ ಭಕ್ತರು ಕೂಡಾ ಹೆಜ್ಜೆ ಹಾಕುತ್ತಾರೆ.

ಹೀಗೆ ಒಂದು ಸುತ್ತ ಬಲಿ ಸೇವೆ ನಡೆ ಬಳಿಕ ಬಲಿ ಸೇವೆ ದೇವಸ್ಥಾನದ ಒಳಾಂಗಣ ಪ್ರವಶೇಶಿಸುತ್ತದೆ. ಅಲ್ಲಿ ಮತ್ತೊಂದು ಸುತ್ತು ಬಂದು ಆ ಬಳಿಕ ತನೆಯನ್ನು ತಲೆಯಿಂದ ಇಳಿಸಿ ದೇವಸ್ಥಾನದ ಪ್ರಧಾನ ಅರ್ಚಕರು ಅದನ್ನು ರಾಜರಾಜೇಶ್ವರಿ ದೇವಿಯ ಮುಂಬಾಗದಲ್ಲಿ ಇಟ್ಟು ಪೂಜೆ ವಿ-ವಿಧಾನಗಳನ್ನು ನೆರವೇರಿಸುತ್ತಾರೆ. ನಂತರ ತೆನೆಯನ್ನು ದೇವರ ಉಡಿಯಲ್ಲಿ ಇಟ್ಟು ಮತ್ತೊಮ್ಮೆ ಪೂಜೆ ಸಲ್ಲಿಸುತ್ತಾರೆ.ದೇವಸ್ಥಾನದಲ್ಲಿ ಪೂಜೆ ಆದ ಬಳಿಕ ತೆನೆಯನ್ನು ಬಂದಿರುವಂಹಾ ಭಕ್ತರಿಗೆ ಹಂಚುವ ಕ್ರಮವಿರುತ್ತದೆ. ಅದಕ್ಕಾಗಿ ಮೊದಲೇ ದೇವಸ್ಥಾನದ ಹೊರಾಂಗಣ ಹಾಗೂ ಒಳಾಂಗಣದ ಸುತ್ತ ಎಲೆಇಟ್ಟು ಕಾಯುತ್ತಿರುತ್ತಾರೆ. ಇದಕ್ಕೆ ತನ್ನ ಮನೆಯಲ್ಲಿ ಬೆಳೆದ ತರಕಾರಿ, ವೀಲ್ಯದೆಲೆ, ಅಡಿಕೆ ಇಟ್ಟುಕೊಂಡಿರುತ್ತಾರೆ. ಪೂಜೆ ನಡೆದ ಬಳಿಕ ತೆನೆಯನ್ನು ಹಂಚುವ ಕ್ರಮ ಇರುವುದರಿಂದ ಈ ರೀತಿ ಜನರು ಮೊದಲೇ ಸಿದ್ಧತೆ ಮಾಡಿಕೊಂಡಿರುತ್ತಾರೆ. ತೆನೆಯನ್ನು ಗರ್ಭಗುಡಿಯಲ್ಲಿರುವ ಬ್ರಾಹ್ಮಣರಿಗೆ ಮೊದಲು ಹಂಚಲಾಗುತ್ತದೆ. ನಂತರ ಬ್ರಾಹ್ಮಣರು ಪ್ರಸಾದ ಹಾಗೂ ತೆನೆಯನ್ನು ಹಿಡಿದುಕೊಂಡು ಅದನ್ನು ಮೊದಲೇ ಎಲೆ ಹಾಕಿಕೊಂಡು ಕಾಯುತ್ತಿರುವ ಭಕ್ತರ ಎಲೆಗಳಿಗೆ ಹಾಕುತ್ತಾರೆ. ನಂತರ ಮತ್ತೊಂದು ಪೂಜೆ ನಡೆದ ಬಳಿಕ ಪುರೋಹಿತರು ಆ ಪ್ರಸಾದವನ್ನು ಹಿಡಿದುಕೊಂಡು ಹೋಗುವಂತೆ ಸೂಚನೆ ನೀಡುತ್ತಾರೆ. ಆ ಬಳಿಕ ಭಕ್ತರು ಅದನ್ನು ಮನೆಗೆ ತೆಗೆದುಕೊಂಡು ಹೋಗುತ್ತಾರೆ.
ಮಧ್ಯಾಹ್ನದ ಪೂಜೆ ನಡೆದ ಬಳಿಕ ದೇವಸ್ಥಾನದಲ್ಲಿ ಪುದ್ದರ್ ಆಚರಿಸಲಾಗುತ್ತದೆ. ಅಲ್ಲದೆ ದೇವರಿಗೆ ನೈವೇದ್ಯವನ್ನು ಅರ್ಪಿಸಿ ಊರವರಿಗೆ ನೀಡಲಾಗುತ್ತದೆ. ಭಕ್ತಾಗಳು ನೈವೇದ್ಯವನ್ನು ಮನೆಗೆ ಕೊಂಡುಹೋಗುತ್ತಾರೆ. ಪೆÇಳಲಿ ದೇವಸ್ಥಾನದಲ್ಲಿ ಪುದ್ದರ್ ನಡೆದ ಬಳಿಕ ಪೆÇಳಲಿಯ ಸಾವಿರ ಸೀಮೆಗೆ ಸಂಬಂಧಪಟ್ಟ ಊರಿನವರು ಪುದ್ದರ್ ಆಚರಿಸುತ್ತಾರೆ.ದೇವಸ್ಥಾನದಲ್ಲಿ ಪ್ರಸಾದವಾಗಿ ಸಿಕ್ಕ ತೆನೆಯನ್ನು ಹಿಡಿದುಕೊಂಡು ಭಕ್ತರು ಮನೆಗೆ ಹೋಗುತ್ತಾರೆ. ಅದನ್ನು ತುಳಸಿಕಟ್ಟೆ, ತೆಂಗಿನ ಮರ ಮನೆಯ ಐಶ್ವರ್ಯ ಕೊಡುವ ವಸ್ತುಗಳಾದ ಹಣದ ಡಬ್ಬಿ, ಮನೆಯ ಹೊಸ್ತಿಲು ಮುಂತಾದುವುಗಳಿಗೆ ಕಟ್ಟಲಾಗುತ್ತದೆ.
ಅದರ ತೆನೆಯಲ್ಲಿರು ಭತ್ತದ ಕಾಳನ್ನು ತೆಗೆದು ಅದನ್ನು ಹಳೆ ಅಕ್ಕಿಗೆ ಸೇರಿಸಿ ಪುದ್ದರ್ ಮಾಡಲಾಗುತ್ತದೆ. ಪುದ್ದರ್ ವೇಳೆ ಮನೆಯಲ್ಲಿ ಊರಲ್ಲೇ ಬೆಳೆದ ತರಕಾರಿಗಳಾದ ಮುಳ್ಳುಸೌತೆ, ಬೆಂಡೆಕಾಯಿ, ಹೀರೆ, ಅರಿವೆ, ಬೆಳ್ತಕ್ಕಿ ಪಾಯಸ ಊಟ ಸಿದ್ಧಪಡಿಸಲಾಗುತ್ತದೆ. ವಿಶೇಷವಾಗಿ ಸಾಗುವಳಿದಾರರ ಮನೆಯಲ್ಲಿ ವಿಶೇಷವಾಗಿ ಆಚರಣೆ ಮಾಡಲಾಗುತ್ತಿದ್ದು ಹಿಂದಿನ ಕಾಲದಲ್ಲಿ ನೆಂಟರನ್ನು ಆಹ್ವಾನಿಸಿ ಊಟ ಮಾಡುವ ಪದ್ದತಿ. ಗದ್ದೆಯಲ್ಲಿ ಕೊಯ್ಲಿಗೆ ಸಿದ್ದವಾಗಿರುವ ಬತ್ತದ ಪೈರು ನಳನಳಿಸಿ ನಿಂತಿರುವುದು ಊರವರಿಗೆ ಒಂದು ಸಂಭ್ರಮದ ವಿಷಯವಾಗಿತ್ತು. ಕೆಲವರು ದೇವಸ್ಥಾನದಿಂದ ತೆನೆ ತಾರದವರು ಮನೆಯಲ್ಲಿ “ಇಲ್ಲ್ ದಿಂಜಾವುನಿ(ಮನೆ ತುಂಬಿಸುವುದು) ಎಂಬ ರೀತಿಯಲ್ಲಿ ತೆನೆಗೆ ವಿಶೇಷ ರೀತಿಯ ಪೂಜೆ ಸಲ್ಲಿಸಿ ಪುದ್ದರ್ ಸವಿಯುತ್ತಿದ್ದರು. ಒಂದು ವೇಳೆ ಬೇರೆ ಮನೆಯಲ್ಲಿ ಪುದ್ದರ್ ಆಚರಿಸಬೇಕಾಗಿದ್ದರೆ ಆ ಮನೆಯವರು ಬೇರೆ ಮನೆಯವರ ಪುದ್ದರ್ ಊಟ ಸವಿಯುತ್ತಿರಲಿಲ್ಲ. ಆದರೆ ಇತ್ತೀಚೆಗೆ ದಿನಗಳಲ್ಲಿ ಪುದ್ದರ್ ಆಚರಣೆ ಮರೆಯಾಗುತ್ತಾ ಬರುತ್ತಿದೆ.
