ಪೊಳಲಿ : ಬ್ರಹ್ಮಕಲಶೋತ್ಸವದ ಪ್ರಯುಕ್ತ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಪೊಳಲಿಯಲ್ಲಿ ದುರ್ಗಾಪರಮೇಶ್ವರಿ ವೇದಿಕೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಣೆಗೊಂಡಿತು. ನಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಾಗು ದೇವಸ್ಥಾನದ ಅನುವಂಶಿಕ ವಾದಕರಾದ ಶ್ರೀ ಚಂದ್ರಶೇಖರ್ ದೇವಾಡಿಗ ಪೊಳಲಿ ಇವರ ಸಾರಥ್ಯದಲ್ಲಿ ಸಾಕ್ಸಫೋನ್ ಕಾರ್ಯಕ್ರಮ ಜರಗಿತು.
ಸಾಕ್ಸಫೋನ್ನಲ್ಲಿ ನಾರಯಣ ಜೋಗಿ ಮೂಡಶೆಡ್ಡೆ, ಭರತ್ ಜೋಗಿ ಮತ್ತು ತವಿಲು ವಾದನದಲ್ಲಿ ನಾಗರಾಜ್ ಮಾಸ್ತರು, ನಿತ್ಯಾನಂದ ದೇವಾಡಿಗ ಮತ್ತು ತಾಳದಲ್ಲಿ ಸುಕೇಶ್ ಜೋಗಿ ಪಾಲ್ಗೊಂಡಿದ್ದರು.ಇವರಿಗೆ ದೇವಸ್ಥಾನದ ವತಿಯಿಂದ ದೇವಸ್ಥಾನದ ಮೊಕ್ತೇಸರರು, ಜೀರ್ಣೋದ್ದಾರ ಸಮಿತಿಯ ಸದಸ್ಯರಾದ ಬಿ.ತಾರನಾಥ ಆಳ್ವ ಉಳಿಪಾಡಿಗುತ್ತು ಸ್ಮರಣಿಕೆ ನೀಡಿ ಗೌರವಿಸಿದರು.
