ಉಡುಪಿ: 2016ರಲ್ಲಿ ನಡೆಯಲಿರುವ ಪರ್ಯಾಯದ ಮಠದ ಪೀಠಾರೋಹಣವನ್ನು ಪೇಜಾವರ ಶ್ರೀಗಳೇ ಮಾಡಲಿದ್ದಾರೆ.
ಮುಂದಿನ ಪರ್ಯಾಯವನ್ನು ಪೇಜಾವರದ ಕಿರಿಯ ಸ್ವಾಮೀಜಿ ವಿಶ್ವಪ್ರಸನ್ನರು ಮಾಡಲಿದ್ದಾರೆಂದು ನಿರೀಕ್ಷಿಸಲಾಗಿತ್ತು. ಆದರೆ ಕಿರಿಯ ಯಿತಿಗಳ ಒತ್ತಾಸೆಯಂತೆ ಹಿರಿಯ ಸ್ವಾಮೀಜಿಗಳಾದ ವಿಶ್ವೇಶತೀರ್ಥ ಸ್ವಾಮೀಜಿಯವರೇ ಪೀಠಾರೋಹಣ ನಡೆಸಲಿದ್ದಾರೆ.

ಸೋದೆ ಮಠದ ವಾದಿರಾಜ ಸ್ವಾಮೀಜಿಗಳು ತನ್ನ ಇತಿಹಾಸದಲ್ಲಿ ಅಷ್ಟಮಠಗಳ ಪಂಪರೆಯಲ್ಲಿ ಸಾರ್ವಭೌಮ ಆಗಿದ್ದರು. ಇದೀಗ ಅದೇ ದಾಖಲೆಯನ್ನು ಪೇಜಾವರ ಶ್ರೀಗಳು ಸಮಗಟ್ಟುವ ಮೂಲಕ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.ಭವಿಷ್ಯದಲ್ಲಿ ಯಾರೂ ಕೂಡಾ ಐದು ಪರ್ಯಾಯ ನಡೆಸುವುದು ಸಾಧ್ಯವಿಲ್ಲದ ಕಾರಣ ಈ ದಾಖಲೆ ಕೃಷ್ಣ ಮಠದಲ್ಲಿ ಶಾಶ್ವತವಾದ ದಾಖಲೆಯಾಗಿ ಉಳಿಯಲಿದೆ
