ಬಂಟ್ವಾಳ: ಕರ್ನಾಟಕ ರಾಜ್ಯ ಕರಾವಳಿ ಕುಲಾಲ ಕುಂಬಾರ ರ ಮಹಿಳಾ ಸಂಘ ಬಿಸಿರೋಡು ಇವರ ವತಿಯಿಂದ ಬಿಸಿರೋಡಿನ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನದ ಲ್ಲಿ ಮಹಿಳೆಯರಿಗಾಗಿ ಸಾಮೂಹಿಕ ಕುಂಕುಮಾರ್ಚನೆ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಸುಮಂಗಲಿಯರಿಗೆ ಸಕಲ ಸೌಲಭ್ಯ ವನ್ನು ನೀಡುವ ಇಷ್ಟಾರ್ಥ ಈಡೇರಿಸುವ ಹಾಗೂ ಅವಿವಾಹಿತರಿಗೆ ಕ್ಷಿಪ್ರ ವಿವಾಹವ ಕರುಣಿಸುವ ದೃಷ್ಟಿಯಿಂದ ಈ ಪೂಜೆಯನ್ನು ನಡೆಸಲಾಗುವುದು ಎಂದು ಸಮಿತಿಯ ಅದ್ಯಕ್ಷೆ ಯಶೋದಾ ತಿಳಿಸಿದ್ದಾರೆ.

