ಮೂಡುಬಿದಿರೆ: ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಮೊಸರು ಕುಡಿಕೆ ಉತ್ಸವಕ್ಕೆ ಪೂರಕವಾಗಿ ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಸಮಾಜ ಮಂದಿರದಲ್ಲಿ ಆ.19 ಭಾನುವಾರ ಏರ್ಪಡಿಸಲಾದ 27ನೇ ವರ್ಷದ ಮುದ್ದು ಕೃಷ್ಣ ವೇಷ ಸ್ಪರ್ಧೆಯನ್ನು ದ.ಕ. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುದರ್ಶನ ಎಂ. ಉದ್ಘಾಟಿಸಿದರು.

ಸಂಘಟನೆಯ ಅಧ್ಯಕ್ಷ ಬಿ. ಗಣೇಶ ರಾವ್, ಸಂಚಾಲಕ ಸಂತೋಷ್ ಕುಮಾರ್, ಸದಸ್ಯರು, ತೀರ್ಪುಗಾರರಾದ ಮಣಿ ಕೋಟೆಬಾಗಿಲು, ಸುರೇಖಾ ಭಟ್ ಉಪಸ್ಥಿತರಿದ್ದರು.

1ರಿಂದ 2ವರ್ಷ, 2ರಿಂದ 4 ವರ್ಷ, 4ರಿಂದ 6 ವರ್ಷ, 6 ರಿಂದ8 ಹಾಗೂ 8ರಿಂದ 10 ವರ್ಷ ಈ ಐದು ವಿಭಾಗಗಳಲ್ಲಿ ಸ್ಪರ್ಧೆ ನಡೆದಿದ್ದು, 215 ಮಂದಿ ಪಾಲ್ಗೊಂಡಿದ್ದು ವಿಜೇತರಿಗೆ ಬಹುಮಾನವಲ್ಲದೆ ಎಲ್ಲ ಮಕ್ಕಳಿಗೂ ಪದಕ ತೊಡಿಸಿ ಪುರಸ್ಕರಿಸಲಾಯಿತು.
