ಪುತ್ತೂರು :ಬೆಂಗಳೂರು ಜಯದೀಪ ಎಂಟರ್ ಪ್ರೈಸಸ್ ಸಂಸ್ಥೆ ಯಲ್ಲಿ ಮೇಲ್ವಿಚಾರಕ ರಾಗಿ ಕೆಲಸ ಮಾಡಿಕೊಂಡಿದ್ದ ಸದ್ರಿ ಸಂಸ್ಥೆಯ ತಾತ್ಕಾಲಿಕ ಪ್ರತಿನಿಧಿಯಾಗಿ ಜಗದೀಶ್ ಎಂಬವರು ಬೆಂಗಳೂರಿನಿಂದ ಕಳುಹಿಸಿದ ಸರಕುಗಳನ್ನು ಪುತ್ತೂರಿನಲ್ಲಿ ಪಡೆದುಕೊಂಡು ಅದನ್ನು ಸಂಬಂಧಪಟ್ಟವರಿಗೆ ಡೆಲಿವರಿ ಮಾಡುತ್ತಿದ್ದರು. ದಿ: 29.06.2018,ರಂದು ಪುತ್ತೂರಿಗೆ ಕಳುಹಿಸಿದ ಕಂಸೈನ್ ಮೆಂಟ್ ನಲ್ಲಿ ಒಟ್ಟು 4 parcel ಗಳಿದ್ದುಅವುಗಳ ಪೈಕಿ ಪುತ್ತೂರಿನ ತಾತ್ಕಾಲಿಕ ಪ್ರತಿನಿಧಿ ಜಗದೀಶ್ ರವರಿಗೆ ಕೊಡಲು ಲಗೇಜು ವಾಹನ ದಲ್ಲಿ ಜಯದೀಪ ಎಂಟರ್ ಪ್ರೈಸಸ್ ಸಂಸ್ಥೆ ಬೆಂಗಳೂರು ನ ಕಚೇರಿಯಿಂದ ಕಳುಹಿಸಿದ್ದ ಪಾರ್ಸೆಲ್ ಡೆಲಿವರಿ ಸಿಕ್ಕಿರುವುದಿಲ್ಲ. 16 Samsung company ಯ mobile phone ಗಳಿದ್ದು, ಒಟ್ಟು ಸೊತ್ತುಗಳ ಅಂದಾಜು ಮೌಲ್ಯ 2,66,155.37 ಆಗಿರುತ್ತದೆ. 
ಸದ್ರಿ ಪ್ರಕರಣದ ಆರೋಪಿ ಪತ್ತೆ ಕರ್ತವ್ಯ ದಲ್ಲಿ ಪುತ್ತೂರು ನಗರ ಠಾಣಾ ಪೊಲೀಸ್ ನಿರೀಕ್ಷಕರಾದ ಮಹೇಶ್ ಪ್ರಸಾದ್ ರವರ ನಿರ್ದೇಶನದಲ್ಲಿ ಪೊಲೀಸ್ ಉಪನಿರೀಕ್ಷಕರಾದ ಅಜಯ್ ಕುಮಾರ್ ಡಿ.ಎನ್ ರವರು ನೇತೃತ್ವದಲ್ಲಿ ಠಾಣಾ ಎಎಸ್ ಐ ಶ್ರೀಧರ್ ಮಣಿಯಾಣಿ, ಮತ್ತು ಹೆಚ್ ಸಿ 665, ಜಗದೀಶ್, ಊಅ 838 ಹಿತೋಷ್, Pಅ 2276 ಚೋಳಪ್ಪ, Pಅ 2381 ಕಿರಣ್ ಕುಮಾರ್ ರವರು ಆರೋಪಿಯನ್ನು ಪತ್ತೆ ಮಾಡಲು ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ತಡಸ ಠಾಣಾ ವ್ಯಾಪ್ತಿಯ ಅಡವಿಸೊಮಾಪುರ ಗ್ರಾಮದ ಆರೋಪಿ ರವಿಯನ್ನು ಹಾಗೂ ಸೊತ್ತುಗಳನ್ನು ವಶಪಡಿಸಿಕೊಂಡಿರುವುದಾಗಿದೆ.
