ಬಂಟ್ವಾಳ: ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘ(ರಿ.) ಮೈಸೂರು ಮಂಗಳೂರು ವ್ರತ್ತ ವತಿಯಿಂದ ಬಿಸಿರೋಡಿನ ರಿಕ್ಷಾ ಭವನದಲ್ಲಿ ನೂತನ ಶಾಸಕರಿಗೆ ಗೌರವ ನೀಡಲಾಯಿತು.

ಕಾರ್ಯಕ್ರಮದ ಬಳಿಕ ನೌಕರರ ವೇತನದ ಬಗ್ಗೆ ಹಾಗೂ ಹುದ್ದೆ ಖಾಯಂ ಮಾಡುವ ಬಗ್ಗೆ ಹೀಗೆ ಅನೇಕ ಸಮಸ್ಯೆ ಗಳ ಬಗ್ಗೆ ಶಾಸಕರು ಗಮನ ಸೆಳೆದರು.

ನೌಕರರ ಮನವಿಗೆ ಸ್ಪಂದಿಸಿದ ಶಾಸಕರು ನಿಮ್ಮ ಹುದ್ದೆಯ ಬಗ್ಗೆ ಅಗಿರುವ ಅವ್ಯವಸ್ಥೆ ಗಳನ್ನು ಶೀಘ್ರವಾಗಿ ಸರಕಾರದ ಗಮನಕ್ಕೆ ತಂದು ಪರಿಹರಿಸುವ ಬಗ್ಗೆ ನಾನು ಶ್ರಮವಹಿಸುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾದ್ಯಕ್ಷ ಎಸ್. ಹರೀಶ್, ಉಪಾಧ್ಯಕ್ಷ ಬಿ.ಮೋಹನ್ ಹಾಗೂ ನೌಕರರು ಉಪಸ್ಥಿತರಿದ್ದರು
