ಬಂಟ್ವಾಳ: ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಗೆ ಮತದಾರರ ಸಂಪರ್ಕ ಮತ್ತು ಬಂಟ್ವಾಳ ಕ್ಷೇತ್ರದ ಪದವಿ ಪೂರ್ವಕಾಲೇಜು, ಪ್ರೌಢಶಾಲೆಗಳಿಗೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಭೇಟಿ ನೀಡಿ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಕ್ಯಾ. ಗಣೇಶ್ಕಾರ್ಣಿಕ್, ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಅಯನೂರು ಮಂಜುನಾಥ್ ಪರ ಮತಯಾಚಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಕ್ಷೇತ್ರಾಧ್ಯಕ್ಷ ಬಿ.ದೇವದಾಸ ಶೆಟ್ಟಿ, ರಾಜ್ಯ ಬಿಜೆಪಿ ಸಹವಕ್ತಾರೆ ಸುಲೋಚನಾ ಜಿ.ಕೆ ಭಟ್, ಪ್ರಧಾನ ಕಾರ್ಯದರ್ಶಿ ರಾಮದಾಸ ಬಂಟ್ವಾಳ, ರತ್ನ ಕುಮಾ ರ್ಚೌಟ, ಪ್ರಭಾಕರ ಪ್ರಭು, ಸತೀಶ್ ಪೂಜಾರಿ, ಮಾಧವ ಶೆಟ್ಟಿಗಾರ್, ಎಸ್ಪಿ ಶ್ರೀಧರ್, ವಿಜಯರೈ, ಪುರುಷೋತ್ತಮ ಶೆಟ್ಟಿ, ಮೋಹನದಾಸಗಟ್ಟಿ, ಚಂದ್ರಶೇಖರ ಶೆಟ್ಟಿ, ರಘುವೀರ್ ಭಟ್, ದಿನೇಶ್ ಶೆಟ್ಟಿ,ಶಂಕರ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಹರೀಶ್ ನೈನಾಡ್, ರಾಜಗೋಪಾಲ್ ನಾಯಕ್, ಮೋಹನ ಆಚಾರ್ಯ, ಶೇಷಗಿರಿ ಪೂಜಾರಿ, ರಾಮಕೃಷ್ಣ ಮಯ್ಯ, ಪುರುಷೋತ್ತಮ ಪೂಜಾರಿ, ಧರಣೇಂದ್ರ ಜೈನ್ ಉಪಸ್ಥಿತರಿದ್ದರು.

