
ಬಂಟ್ವಾಳ: ತಾಲೂಕಿನ ವೀರಕಂಭದ ಅರೆಬೆಟ್ಟುನಲ್ಲಿ ಬಿಜೆಪಿ ಕಾರ್ಯಕರ್ತರಿಂದ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ನೂತನ ಶಾಸಕರಾಗಿ ಆಯ್ಕೆಯಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಜಿಲ್ಲಾ ಎಸ್ಸಿ ಮೋರ್ಚಾದ ಅಧ್ಯಕ್ಷ ದಿನೇಶ್ ಅಮ್ಟೂರು, ಕ್ಷೇತ್ರ ಕಾರ್ಯದರ್ಶಿ ಸೀಮಾ ಮಾಧವ, ಕ್ಷೇತ್ರ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜಯಂತಿ, ರತ್ನಕರ ಭಂಡಾರಿ, ಸಂದೇಶ್ ಕುಮಾರ್, ರಮೇಶ್ ಕೇಪುಲಕೋಡಿ, ರಾಮಚಂದ್ರ ಪೂಜಾರಿ, ಮಹಾಲಿಂಗ ರೈ, ಜಯಪ್ರಕಾಶ್ ತೆಕ್ಕಿಬಾಬು ಉಪಸಿತ್ಥರಿದ್ದರು.
ಚಂದ್ರಶೇಖರ ಬಂಗೇರ ಸ್ವಾಗತಿಸಿ ಮತ್ತು ಕಾರ್ಯಕ್ರಮವನ್ನು ನಿರೂಪಿಸಿದರು,
