ಮೈಸೂರು: ಪುತ್ರಶೋಕದಿಂದ ನೊಂದ ವೈದ್ಯ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ಬುಧವಾರ ನಡೆದದೆ.
ಮೈಸೂರಿನ ಸರಸ್ವತಿಪುರ 14 ನೇ ಮುಖ್ಯ ರಸ್ತೆಯ ನಿವಾಸಿಗಳಾದ ಡಾ. ಸತೀಶ, ಡಾ. ವೀಣಾ ಆತ್ಮಹತ್ಯೆ ಮಾಡಿಕೊಂಡ ವೈದ್ಯ ದಂಪತಿ ಎಂದು ಗುರುತಿಸಲಾಗಿದೆ.
ಪುತ್ರ ಶೋಕದಿಂದ ಖಿನ್ನತೆಗೊಳಗಾಗಿದ್ದ ಈ ದಂಪತಿ ಒಂದೇ ಸೀರೆಗೆ ನೇಣು ಬಿಗಿದುಕೊಂಡು ಸಾವಿನ ಹಾದಿ ತುಳಿದಿದ್ದಾರೆ.

