ಬ್ಯಾಂಕ್ ಗ್ರಾಹಕರೇ ನೀವು ಹೊಂದಿರುವ ಬ್ಯಾಂಕ್ ನಲ್ಲಿ ಹಣದ ವಹಿವಾಟು ನಡೆಸಲು ಇದ್ದರೆ ಇಂದೇ ಬಿಡುವು ಮಾಡಿ ಮುಗಿಸಿ ಬಿಡಿ. ಯಾಕೆದರೆ ಜ. 25ರಂದು ರಾಜ್ಯ ಬಂದ್ ಸೇರಿದಂತೆ ನಾಲ್ಕು ದಿನಗಳ ಕಾಲ ಬ್ಯಾಂಕ್ ಗೆ ಸಾಮೂಹಿಕ ರಜೆ ಇರಲಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ವಹಿವಾಟು ಸೇರಿದಂತೆ, ಎಟಿಎಂ ಸೇವೆಗಳು ಬಹುತೇಕ ಸ್ಥಗಿತಗೊಳ್ಳಲಿದೆ.
ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡ ಪರ ಸಂಘಟನೆಗಳು ಜ. 25ರಂದು (ನಾಳೆ) ರಾಜ್ಯ ಬಂದ್ ಗೆ ಕರೆ ನೀಡಿರುವುದರಿಂದ ಅಂದು ಬ್ಯಾಂಕ್ ಗಳು ಕಾರ್ಯಾಚರಿಸುವುದು ಬಹುತೇಕ ಅನುಮಾನ. ಇನ್ನೂ ಜ.26ರಂದು ಗಣರಾಜ್ಯೋತ್ಸವ. ಆನಂತರ ಬರುವ ದಿನಗಳು ಬ್ಯಾಂಕ್ ಗೆ ಮಾಮೂಲಿ ರಜೆ ಇದೆ. ಹೀಗಾಗಿ ಬ್ಯಾಂಕ್ ವಹಿವಾಟು ಇದ್ದರೆ ಇಂದೇ ಮುಗುಸಲು ಪ್ರಯತ್ನಿಸಿ.

