ಮಂಗಳೂರು: ಅಕ್ಷಯ ಪತ್ರ ಅಡುಗೆ ಮನೆಯ ಶಿಲಾನ್ಯಾಸ ಕಾರ್ಯಕ್ರಮ ಡಿ.22 ಕ್ಕೆ ಬೆಂಜನಪದವಿನ ಕೆನರಾ ಕಾಲೇಜಿನಲ್ಲಿ ಶುಕ್ರವಾರ ನಡೆಯಲಿದೆ.ಅಂದು ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹುಬ್ಬಳ್ಳಿ-ಧಾರವಾಡ ಅಕ್ಷಯ ಪತ್ರ ಫೌಂಡೇಶ್ ಅಧ್ಯಕ್ಷ ರಾಜೀವ್ ಲೋಕನ್ ದಾಸ್, ದ.ಕ.ಜಿಲ್ಲೆಯ ಅಕ್ಷಯ ಪತ್ರ ಫೌಂಡೇಶ್ ಅಧ್ಯಕ್ಷೆ ಕಾರುಣ್ಯ ಸಾಗರ ದಾಸ ವಹಿಸಲಿದ್ದು, ಅನುಪಸ್ಥಿತಿಯಲ್ಲಿ ಶ್ರೀ ಶ್ರೀ ವಿದ್ಯಾದೀಶ ತೀರ್ಥ ಸ್ವಾಮೀಜಿ, ಶ್ರೀ ಶ್ರೀ ಇಶಾಪ್ರಿಯಾ ತೀರ್ಥ ಸ್ವಾಮೀಜಿ, ಫಾ. ಡಾ. ಅಲೋಶಿಯಸ್ ಪಾವುಲ ಡಿಸೋಜಾ ಹಾಗೂ ಚಂಚಲಪತಿ ದಾಸ ಉಪಸ್ಥಿತಿಯಲ್ಲಿರುವರು.
ಅರಣ್ಯ ಸಚಿವ ಬಿ.ರಮಾನಾಥ.ರೈ, ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಸಚಿವ ಯು.ಟಿ.ಖಾದರ್ ಮುಖ್ಯ ಅಥಿತಿಗಳಾಗಿ ಭಾಗವಹಿಸಲಿದ್ದು, ಗೌರವ ಅಥಿತಿಗಳಾಗಿ ಎಮ್ ಆರ್ ಪಿಎಲ್ ಮ್ಯಾನಜಿಂಗ್ ಡೈರೆಕ್ಟರ್ ಎಚ್.ಕುಮಾರ್, ಕರ್ಣಾಟಕ ಬ್ಯಾಂಕ್ ಮ್ಯಾನಜಿಂಗ್ ಡೈರೆಕ್ಟರ್ ಎಂ.ಎಸ್.ಮಹಬಲೇಶ್ವರ್ ಭಟ್, ನಿಟ್ಟೆ ವಿವಿಯ ಚೇರ್ ಮ್ಯಾನ್ ಡಾ.ವಿನಯ್ ಹೆಗ್ಡೆ, ಯನಪೋಯ ವಿವಿಯ ಚ್ಯಾರ್ ಮ್ಯಾನ್ ಯನಪೋಯ ಅಬ್ದುಲ್ಲಾ ಕಞಿ, ಜಿ.ಪಂ. ಅಧ್ಯಕ್ಷೆ ಮೀಕಾಕ್ಷೀ ಶಾಂತಿಗೋಡ್, ವಿಧಾನ ಪರಿಷತ್ ಸದಸ್ಯ ಹಾಗೂ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಶಾಸಕ ಲೋಬೋ, ಶಾಸಕ ಮೊಯ್ದಿನ್ ಬಾವಾ, ಶಾಸಕ ವಿನಯ್ ಕುಮಾರ್ ಸೊರಕೆ, ಮಂಗಳೂರು ಮೇಯರ್ ಕವತಾ ಸನಿಲ್, ಐಎಎಸ್, ಡೆಪ್ಯೂಟಿ ಕಮಿಷನರ್ ಎಂ.ಆರ್.ರವಿ ಹಾಗೂ ಮೇರಾಮಜಲು ಗ್ರಾ.ಪಂ ಅಧ್ಯಕ್ಷ ಸತೀಶ್ ನಾಯ್ಗ ಕೊಡ್ಮಾನ್ ಕೋಡಿ ಉಪಸ್ಥಿತರಿರುವರು.
