ಕೈಕಂಬ: ಪೊಳಲಿ ಶ್ರೀರಾಜರಾಜೇಶ್ವರೀ ದೇವರ ಗರ್ಭಗುಡಿಯ ಪಾದುಕಾನ್ಯಾಸ-ನಿಧಿಕುಂಭ ಕಾರ್ಯಕ್ರಮವು ಸೆ.4ರಂದು ಸೋಮವಾರ ವಾಸ್ತುಶಿಲ್ಪಿ ಮಹೇಶ್ ಮುಣಿಯಂಗಳ್ ಮಾರ್ಗದರ್ಶನದಲ್ಲಿ ಕ್ಷೇತ್ರದ ತಂತ್ರಿಗಳಾದ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ನೇರವೇರಿತು. ವೆಂಕಟೇಶ್ ತಂತ್ರಿವಿಧಿವಿಧಾನಗಳನ್ನು ನೆರವೇರಿಸಿದರು.
ದೇವಳದ ಅರ್ಚಕರಾದ ಪೊಳಲಿ ಮಾಧವ ಭಟ್, ನಾರಾಯಣ ಭಟ್, ರಾಮ್ಭಟ್, ದೋಟ ಪರಮೇಶ್ವರ್ ಭಟ್, ಪರ್ದಕಂಡ ಮಾಧವ ಭಟ್, ಪೊಳಲಿ ಪದ್ಮನಾಭ ಭಟ್ , ಅನಂತ ಭಟ್, ವಿಷ್ಣುಮೂರ್ತಿ ನಟ್ಟೋಜ, ಮಾಧವ ಮಯ್ಯ ಸಹಕರಿಸಿದರು ಜೀರ್ಣೋದ್ದಾರ ಸಮಿತಿಯ ಕಾರ್ಯದರ್ಶಿ ಹಾಗೂ ದೇವಳದ ಮೊಕ್ತೇಸರರಾದ ಉಳಿಪಾಡಿಗುತ್ತು ತಾರನಾಥ ಆಳ್ವ, ಉಪಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಆಡಳಿತ ಮೊಕ್ತೇಸರ ಅಮ್ಮುಂಜೆಗುತ್ತು ಡಾ.ಮಂಜಯ್ಯ ಶೆಟ್ಟಿ, ಮೊಕ್ತೇಸರ ಚೇರಸೂರ್ಯನಾರಾಯಣ ರಾವ್, ಜೀಣೋದ್ಧಾರ ಕಮಿಟಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ರಾಜೇಶ್ ನಾಯಕ್ ಉಳಿಪಾಡಿ ಗುತ್ತು,ಬಿ .ರಘುನಾಥ ಸೋಮಾಯಾಜಿ, ಅರುಣ್ ಆಳ್ವ,ಸೇಸಪ್ಪ ಕೋಟ್ಯಾನ್ ಪಚಿನಡ್ಕ, ಸುಬ್ರಾಯ ಕಾರಂತ್, ಚಂದ್ರಶೇಖರ್ ಭಂಡಾರಿ, ಕೃಷ್ಣರಾಜ್ ಮಾರ್ಲ, ಕಟ್ಟಡ ಸಮಿತಿ ಸದಸ್ಯ ಗಿರಿಧರ್ ಶೆಟ್ಟಿ, ಕಾರ್ಯನಿರ್ವಾಹಣಾಧಿಕಾರಿ ಪ್ರವೀಣ್, ಕರಸೇವಸಮಿತಿ ಸದಸ್ಯರು, ಕಟ್ಟಡ ಕಾಮಗಾರಿ ಸದಸ್ಯರು, ಜನಸಂಪರ್ಕ ಹಾಗೂ ಪ್ರಚಾರ ಸಮಿತಿ ಸದಸ್ಯರು, ಆರ್ಥಿಕ ಸಮಿತಿ ಸದಸ್ಯರು ಹಾಗೂ ಸಾವಿರ ಸೀಮೆಯ ಭಕ್ತಾಧಿಗಳು ಉಪಸ್ಥಿತರಿದ್ದರು.
(ಜೀಣೋದ್ಧಾರ ಸಮಿತಿ ಸದಸ್ಯರಾದ ಬಿ ರಘುನಾಥ ಸೋಮಾಯಾಜಿ ಅವರು ಶ್ರೀ ರಾಜರಾಜೇಶ್ವರೀ ದೇವಳದ ಜೀಣೋದ್ಧಾರದ ಕಾಮಗಾರಿಗೆ ರೂ. 25 ಲಕ್ಷ ದೇಣಿಗೆ ನೀಡುವುದಾಗಿ ಈಸಂದರ್ಭದಲ್ಲಿ ಘೋಷಿಸಿದರು.)
ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ









