ವಿಟ್ಲ: ವ್ಯವಸಾಯ ಸೇವಾ ಸಹಕಾರ ಸಂಘ ಇದರ ವತಿಯಿಂದ ಕುಂಡಡ್ಕ ಪಾದೆ ಅಂಗನವಾಡಿ ಕೇಂದ್ರಕ್ಕೆ ಗೋದ್ರೇಜ್ ಕಪಾಟು ನೀಡಲಾಯಿತು. ಕಪಾಟಿನ ಕೀಯನ್ನು ಅಂಗನವಾಡಿ ಕಾರ್ಯಕರ್ತೆ ಬಿ ದಮಯಂತಿ ಇವರಿಗೆ ಸಂಘದ ಅಧ್ಯಕ್ಷ ಯಂ ಕೆ ಪುರುಷೋತ್ತಮ ಭಟ್ ಬದನಾಜೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ನಿದೇಶಕರಾದ ಲೋಕನಾಥ ಶೆಟ್ಟಿ, ನರ್ಸಪ್ಪ ಪೂಜಾರಿ, ಶಿವಪ್ಪ ನಾಯ್ಕ, ಉದಯ ಕುಮಾರ್, ಅಚ್ಚುತ ನಾಯಕ್, ರೇವತಿ, ಗೌರಿ ಎಸ್ ಎನ್ ಭಟ್ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಶಿಕಲಾ ಉಪಸ್ಥಿತರಿದ್ದರು.
