ಮಂಗಳೂರು: ದ.ಕ ಜಿಲ್ಲಾ ಪಂಚ್ಯಾತ್,ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ,ದ.ಕ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ದಕ್ಷಿಣವಲಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದ.ಕ ಎಸ್.ಡಿ.ಎಂ ಮಂಗಳ ಜ್ಯೋತಿ ಸಮಗ್ರ ಶಾಲೆ ವಾಮಂಜೂರು,ಇವರ ಸಹಯೋಗದಲ್ಲಿ 6 ರಿಂದ 10 ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ-ಬಾಲಕಿಯರ ಜಿಲ್ಲಾ ಮಟ್ಟದ ವಿಶೇಷ ಸಾಮರ್ಥ್ಯದ ಮಕ್ಕಳ ಕ್ರೀಡಾಕೂಟ ಡಿ.29ರಂದು ಮಂಗಳಜ್ಯೋತಿ ಕ್ರೀಡಾಂಗಣ ವಾಮಂಜೂರಿನಲ್ಲಿ ನಡೆಯಲಿದೆ.
ಈ ಸ್ಪರ್ಧೆಯಲ್ಲಿ ಪೂರ್ಣ ಅಂಧರು, ಭಾಗಶಃ ಅಂಧರು ಒಂದು ಕೈ ನ್ಯೂನತೆ, ಒಂದು ಕಾಲು ನ್ಯೂನತೆ,ಮತ್ತು ಶ್ರವಣ ದೋಷ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಜಿಲ್ಲಾ ಸರ್ಜನ್ ಧೃಡೀಕರಣ ಪತ್ರ ಮತ್ತು ಶಾಲೆಯ ಧೃಡೀಕರಣ ಪತ್ರದೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಪ್ರಕಟನೆ ಸೂಚಿಸಿದೆ.

