ಮೂಡಬಿದ್ರೆ: ದೇಶದಲ್ಲಿ ಉಂಟಾಗಿರುವ ಭೀಕರ, ಕ್ಷಾಮ, ಅನಾವೃಷ್ಟಿಯನ್ನು ಪರಿಹರಿಸಿ ಸುಭೀಕ್ಷೆ ನೆಲೆಗೊಳ್ಳಲಿ ಎಂದು ಮೂಡಬಿದ್ರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮೂಡಬಿದ್ರೆಯ ಹನುಮಂತ ದೇವರಿಗೆ 1008 ಸೀಯಾಳಭಿಷೇಕ ಹಾಗೂ ಸಾಮೂಹಿಕ ಪ್ರಾರ್ಥನೆ ನಡೆಯಿತು.

ಇದೇ ಸಂದರ್ಭದಲ್ಲಿ ದೇವಳ ಜೀಣರ್ೋದ್ಧಾರಕ್ಕಾಗಿ ಪಕ್ಷದ ವತಿಯಿಂದ 10 ಸಾವಿರ ರೂ. ದೇಣಿಗೆ ನೀಡಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೇಘನಾಥ ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವಳದ ಆಡಳಿತ ಮೋಕ್ತೇಸರ ಉಮೇಶ್.ಜಿ.ಪೈ, ಜಿ.ಪಂ. ಸದಸ್ಯೆ ಅಂಬಿಕಾ ಡಿ. ಶೆಟ್ಟಿ, ತಾ.ಪಂ ಅಧ್ಯಕ್ಷೆ ರಜನಿ, ಪುರಸಭಾಧ್ಯಕ್ಷೆ ಸುಪ್ರಿಯಾ.ಡಿ.ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ವಲೇರಿಯನ್ ಸಿಕ್ವೇರಾ, ಪ್ರೇಮನಾಥ್ ಮಾರ್ಲ, ಯುವ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ ಸನಿಲ್, ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್, ಕಾಂಗ್ರೆಸ್ ಮುಖಂಡರಾದ ರಾಘು ಪೂಜಾರಿ, ವಿಲ್ಫಡರ್್ ಮೆಂಡೋನ್ಸಾ, ಕ್ಷೇತ್ರದ ಮೋಕ್ತೇಸರ ಅಶೋಕ್ ಮಲ್ಯ ಮತ್ತಿತರರು ಉಪಸ್ಥಿತರಿದ್ದರು.



