ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯ ಇದರ ಕುಳ ಒಕ್ಕೂಟದ ಆಶ್ರಯದಲ್ಲಿ ನೂತನವಾಗಿ ಆರಂಭಗೊಂಡ ಕಲ್ಪವೃಕ್ಷ ಸ್ವಸಹಾಯ ತಂಡವನ್ನು ಬಾಲಕೇಷ್ಣ ಖಂಡಿಗ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು.
ವಿಟ್ಲ ವಲಯ ಮೇಲ್ವಿಚಾರಕ ಜನಾರ್ಧನ ಯೋಜನೆಯ ನಿಯಮಗಳ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿದರು. ಒಕ್ಕೂಟದ ಅಧ್ಯಕ್ಷ ದಾಮೋಧರ, ಸೇವಾ ಪ್ರತಿನಿಧಿ ಯಶೋಧ, ಪದಾಧಿಕಾರಿಗಳಾದ ಲತಾ, ಈಶ್ವರ ಪೂಜಾರಿ ಉಪಸ್ಥಿತರಿದ್ದರು. ತಂಡದ ಪ್ರಬಂಧಕರಾಗಿ ಕುಸುಮಾವತಿ, ಸಂಯೋಜಕರಾಗಿ ರಕ್ಷಿತಾ, ಕೋಶಾಧಿಕಾರಿ ಗಿರಿಜಾ ಇವರನ್ನು ಆಯ್ಕೆ ಮಾಡಲಾಯಿತು.

