ಮಂಗಳೂರು: ದೈವದ ಕಲ್ಲಿಗೆ ಮೂತ್ರ ಮಾಡಿದ್ದನ್ನು ತನ್ನ ಪುಸ್ತಕದಲ್ಲಿ ಉಲ್ಲೇಖಿಸಿದ್ದ ಹಿರಿಯ ಸಾಹಿತಿ ಯು.ಆರ್.ಅನಂತಮೂರ್ತಿ ವಿರುದ್ಧ ನಗರದ ಬಂದರು ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.

ananthu

ಬಜರಂಗ ದಳದ ಜಿಲ್ಲಾ ಸುರಕ್ಷಾ ಪ್ರಮುಖ್ ಪುನೀತ್ ಕೊಟ್ಟಾರಿ ಈ ಬಗ್ಗೆ ದೂರು ನೀಡಿದ್ದು, ಅನಂತಮೂರ್ತಿ ಬರೆದ ‘ಬೆತ್ತಲೆ ಪೂಜೆ ಯಾಕೆ ಮಾಡಬಾರದು?’ ಎಂಬ ಪುಸ್ತಕದಲ್ಲಿ ನನ್ನ ಧಾರ್ಮಿಕ ಭಾವನೆಗೆ ಧಕ್ಕೆ ತರುವ ವಿಚಾರಗಳಿದ್ದವು. ದೇವರು ಹಾಗೂ ದೈವದ ಬಗ್ಗೆ ನಾನು ಸಂಪೂರ್ಣ ನಂಬಿಕೆ ಹೊಂದಿದವನಾಗಿದ್ದು, ಪುಸ್ತಕದಲ್ಲಿ ಉಲ್ಲೇಖಿಸಿದ ವಿಚಾರ ಭಾರತೀಯ ದಂಡ ಸಂಹಿತೆ 295ಎ ಪ್ರಕಾರ ಕ್ರಿಮಿನಲ್ ಅಪರಾಧ. ಈ ಹಿನ್ನೆಲೆಯಲ್ಲಿ ಪುಸ್ತಕ ಬರೆದವರ ಮತ್ತು ಅದನ್ನು ಪ್ರಕಟಿಸಿದ ವಸಂತ ಪ್ರಕಾಶನದ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ತಿಳಿಸಿದ್ದಾರೆ.

ಪುಸ್ತಕದ ಪುಟ ಸಂಖ್ಯೆ 37 ರಲ್ಲಿ ‘ನಮ್ಮ ಹಳ್ಳಿಯ ಮರಗಳ ಕೆಳಗಿದ್ದ ದೈವದ ಕಲ್ಲುಗಳ ಮೇಲೆ ನಾನು ಮೂತ್ರ ವಿಸರ್ಜನೆ ಮಾಡಿದ್ದೆ’, ಮತ್ತು ಪುಟ ಸಂಖ್ಯೆ 71 ರಲ್ಲಿ ‘ಬರೀ ಪುರಾಣ ಕತೆಗಳನಷ್ಟೆ ಅಲ್ಲ, ಕೆಳಜಾತಿಯ ತುಳುವರ ತಂಡಗಳು ಆಡುತ್ತಿದ್ದ ಕೋಲಗಳ ಹಾಗೂ ಪಂರ್ಜುಲಿ ದೈವದ ಬಗ್ಗೆ ಕೇವಲವಾಗಿ ಸಾಮಾನ್ಯ ಕಲ್ಲಿಗೆ ಹೋಲಿಸಿ, ಅದರ ಮೇಲೆ ಮೂತ್ರ ವಿಸರ್ಜನ ಮಾಡಿದ್ದೆ ಎಂಬುದಾಗಿ, ಪಂಜುರ್ಲಿ ಕೋಲ ಕೇವಲ ನಟನೆ’ ಎಂದು ಅವಹೇಳನಕಾರಿಯಾಗಿ ಬರೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹಿಂದೂ ಧಾರ್ಮಿಕ ನಂಬಿಕೆ ಮೇಲೆ ಧಕ್ಕೆ ತರುತ್ತಿರುವ ಈ ಪುಸ್ತಕ ಮಾರಾಟ ನಿಷೇಧಿಸಿ ಪ್ರಸಾರದಿಂದ ಹಿಂದಕ್ಕೆ ಪಡೆಯಬೇಕು ಎಂದು ಪುನಿತ್ ಕೊಟ್ಟಾರಿ ನೀಡಿದ ದೂರಿನಲ್ಲಿ ಆಗ್ರಹಿಸಿದ್ದಾರೆ. ಪುನೀತ್ ನೀಡಿದ ದೂರಿನಂತೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By suddi9

Leave a Reply

Your email address will not be published. Required fields are marked *