ವಿಟ್ಲ: ಯುವಕೇಸರಿ ಅಬೀರಿ ಅತಿಕಾರಬೈಲು ಇದರ ವಾರ್ಷಿಕ ಸಭೆಯು ಚಂದಳಿಕೆ ಶಾಲೆಯಲ್ಲಿ ನಡೆಯಿತು. ಈ ಸಭೆಯಲ್ಲಿ 2016 17 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ವೀರ ಯೋಧರ ಸವಿ ನೆನಪಿಗಾಗಿ 2 ನೇವರ್ಷದ ಸಾರ್ವಜನಿಕ ಕಬಡ್ಡಿ ಪಂದ್ಯಾಟ, ಹಗ್ಗಜಗ್ಗಾಟ ಮತ್ತು ಸನ್ಮಾನ ಕಾರ್ಯಕ್ರಮವನ್ನು ನವೆಂಬರ್ 6 ರಂದು ಚಂದಳಿಕೆ ಶಾಲಾ ವಠಾರದಲ್ಲಿ ನಡೆಸಲು ತೀರ್ಮಾನಿಸಲಾಯಿತು.
ಅಧ್ಯಕ್ಷರಾಗಿ ಚಂದ್ರಹಾಸ ಮೂಲ್ಯ ಅಬೀರಿ, ಗೌರವಾಧ್ಯಕ್ಷರಾಗಿ ವಿಠಲ ಪೂಜಾರಿ ಅತೀಕಾರಬೈಲು, ಕಾರ್ಯದರ್ಶಿ ಶಶಿಧರ ಕೇಪುಳಗುಡ್ಡೆ, ಉಪಾಧ್ಯಕ್ಷರುಗಳು ಲೋಕನಾಥ ಕುರುಂಬಳ ಮತ್ತು ಯತೀಶ ಕೇದಗದಡಿ, ಜತೆಕಾರ್ಯದರ್ಶಿಗಳು ಉದಯ ಅಬೀರಿ ಮತ್ತು ಮಹೇಶ್ ಎಸ್ ಪಿ ಪಡೀಲ್, ಕೋಶಾಧಿಕಾರಿ ಮಧುಕರ ಅಬೀರಿ, ಜತೆಕೋಶಾಧಿಕಾರಿಗಳು ಮಹೇಶ್ ಸಿ ಎಂ ಚಂದಳಿಕೆ ಮತ್ತು ಪುನೀತ್ ಕುರುಂಬಳ, ಸಾಂಸ್ಕೃತಿಕ ಕಾರ್ಯದರ್ಶಿ ವನಿತ್ ಕುಮಾರ್ ಡೆಪ್ಪಿನಿ, ಸಂಚಾಲಕರು ಸುಶಾಂತ್ ಸಾಲಿಯಾನ್ ಚಂದಳಿಕೆ ಮತ್ತು ದಿವಾಕರ ಶೆಟ್ಟಿ ಅಬೀರಿ, ಗೌರವ ಸಲಹೆಗಾರರು ದಯಾನಂದ ಶೆಟ್ಟಿ ಉಜ್ರೆಮಾರು, ಪದ್ಮನಾಭ ಚಪುಡಿಯಡ್ಕ, ಈಶ್ವರ ಬಂಗೇರ ಅಬೀರಿ, ಮತ್ತು ಲೋಕೇಶ್ ಎಸ್ ಎನ್ ವಿಟ್ಲ ಇವರನ್ನು ಆಯ್ಕೆ ಮಾಡಲಾಯಿತು.

