ಮಂಗಳೂರು: ಹಿಂದೂ ಧರ್ಮೀಯರ ನಂಬಿಕೆಗಳನ್ನು ಅವಮಾನಿಸುವ ಹೇಳಿಕೆ ನೀಡಿರುವ ಎಂ.ಎಂ.ಕಲ್ಬುರ್ಗಿ ಖಂಡಿಸಿ ಹಿಂದೂ ಯುವಸೇನೆ ಹಾಗೂ ಬಜರಂಗದಳ ಹಿಂದೂ ಸಂಘಟನೆಗಳು ಕೇಂದ್ರೀಯ ಮಂಡಳಿ ವತಿಯಿಂದ ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಅವರ ಪ್ರತಿಕೃತಿಯನ್ನು ಧಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸಿದ ಹಿಂದೂ ಸಂಘಟನೆಗಳು ಕಲ್ಬುರ್ಗಿಯವರನ್ನು ತಕ್ಷಣ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

