ಮಂಗಳೂರು:ರಾಜ್ಯದ ಇನ್ನೋರ್ವ ಪೋಲಿಸ್ ಅಧಿಕಾರಿ ಮಡಿಕೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಡಿಕೇರಿ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೋಂಡ ಘಟನೆ ನಡೆದಿದೆ. ಡಿ ವೈ ಎಸ್ ಪಿ . ಎಂ ಕೆ. ಗಣಪತಿ (48ವ) ಅವರು ಮಂಗಳೂರು ಐಜಿ ಕಛೇರಿಯಲ್ಲಿ ಡಿ ವೈ ಎಸ್ ಪಿ ಯಾಗಿ ಈ ಮೊದಲು ಕಾರ್ಯ ನಿರ್ವಹಿಸಿದ್ದರು. ಮಡಿಕೇರಿಯ ವಿನಾಯಕ ಲಾಡ್ಜ್ ನಲ್ಲಿ ಸಮವಸ್ತ್ರದಲ್ಲಿಯೇ ನೇಣುಬಿಗಿದು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ.
ಪ್ರಾಮಾಣಿಕ ಅಧಿಕಾರಿಯಾಗಿದ್ದ ಎಂ. ಕೆ. ಗಣಪತಿ ಅವರು ಮಡಿಕೇರಿಯ ಸ್ಥಳೀಯ ಟಿವಿ ಚಾನೆಲ್ ಒಂದರಲ್ಲಿ ಮೇಲಾಧಿಕಾರಿಯವರ ಕಿರುಕುಳಹಾಗೂ ತನಗಾದ ಅನ್ಯಾಯದ ಬಗ್ಗೆ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
