ಮಂಗಳೂರು: ಕದ್ರಿ ಬಂಜನ್ ಆದಿನಾಥೇಶ್ವರ ಶ್ರೀ ನಾಗಬ್ರಹ್ಮ ಕ್ಷೇತ್ರ ಕದ್ರಿ ಬಂಜನ್ ಆದಿಮೂಲಸ್ಥಾನದ ಸಪರಿವಾರ ಶ್ರೀ ನಾಗದೇವರ ಪುನರ್ಪ್ರತಿಷ್ಠೆ ಬ್ರಹ್ಮಕಲಶಾಬೀಷೇಕ ಹಾಗೂ ನಾಗದರ್ಶನ ಸೇವೆ. ಫೆ.27 ರಂದು ಶನಿವಾರ ಆದಿಮೂಲಸ್ಥಾನದ ಸಮಗ್ರ ಧರ್ಮದೈವಗಳಿಗೆ ಶ್ರೀ ಸಾನಿಧ್ಯ ಕಲಶಾಭಿಷೇಕ ಮಹೋತ್ಸವವು ಶ್ರೀ. ಮೋಹನ್ದಾಸ್ ಸ್ವಾಮೀಜಿ ಶ್ರೀ ಧಾಮ ಮಾಣಿಲ ಇವರ ಶುಭಾಶೀರ್ವಚನದೊಂದಿಗೆ, ದೇರೆಬೈಲು ಬ್ರಹ್ಮಶ್ರೀ ವಿಠಲದಾಸ ತಂತ್ರಿಯವರ ನೇತೃತ್ವದಲ್ಲಿ ಜರುಗಿತು.
ರಾತ್ರಿ ಧರ್ಮದೈವಗಳಿಗೆ ನೇಮೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಗೌರವಧ್ಯಕ್ಷರಾದ ಸದಾಶಿವ ಬಂಜನ್ ಪೂನ, ಸುಬ್ಬಯ ಕೆ. ಕುಂಪಲ, ಪೂವಪ್ಪ ಕರಂಬಾರ್ , ವೆಂಕಪ್ಪ ಎನ್ ಬಂಜನ್, ಸಚ್ಚಿದಾನಂದ ಬಾಳೆಬೈಲ್, ಜಯರಾಮ ಕುಲಾಲ್ ಮಾಣಿ, ಪಾಂಡುರಂಗ ಜಪ್ಪು, ಶಿವರಾಮ ಬಾಳೆ ಬೈಲ್, ರಾಜು ಕುಂಪಲ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಕುಟುಂಬಸ್ತರು ಉಪಸ್ಥಿತರಿದ್ದರು.


