ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ಕನ್ನಡ ಅಧ್ಯಾಪಕರ ಸಂಘ-ವಿಕಾಸದ ನೂತನ ಪದಾಧಿಕಾರಿಗಳ ಆಯ್ಕೆ ನಗರದ ವಿಶ್ವವಿದ್ಯಾಲಯ ಕಾಲೇಜಿನ ರವಿಂದ್ರ ಕಲಾ ಭವನದಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ವಿಶ್ವವಿದ್ಯಾನಿಲಯ ಕಾಲೇಜಿನ ಡಾ. ನಾಗಪ್ಪ ಗೌಡ ಕಾರ್ಯದರ್ಶಿಯಾಗಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಡಾ. ಯೋಗೀಶ್ ಕೈರೋಡಿ, ಉಪಾಧ್ಯಕ್ಷರಾಗಿ ಬೆಸೆಂಟ್ ಕಾಲೇಜಿನ ಡಾ. ಮೀನಾಕ್ಷಿ ರಾಮಚಂದ್ರ, ಬೆಳ್ತಂಗಡಿ ಸ. ಪ್ರ. ಕಾಲೇಜಿನ ಡಾ. ಟಿ. ಕೆ. ಶರತ್ ಕುಮಾರ್, ಜೊತೆ ಕಾರ್ಯದರ್ಶಿಯಾಗಿ ಬಂಟ್ವಾಳ ಎಸ್. ವಿ. ಎಸ್. ಕಾಲೇಜಿನ ಡಾ. ನಾಗವೇಣಿ ಮಂಚಿ ಹಾಗೂ ಸುಳ್ಯ ನೆಹರೂ ಮೆಮೇರಿಯಲ್ ಕಾಲೇಜಿನ ಸಂಜೀವ ಕುತ್ಪಾಜೆಯವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರೋ.ಕೃಷ್ಣಮೂರ್ತಿ (ಗೋವಿಂದದಾಸ್ ಕಾಲೇಜು ಸುರತ್ಕಲ್) ಡಾ. ಪ್ರಕಾಶ್ಚಂದ್ರ ಶಿಶಿಲ (ಸ.ಪ್ರ.ಕಾಲೇಜು ರಥಬೀದಿ), ಡಾ. ಅರುಣ್ ಕುಮಾರ್ ಎಸ್. ಆರ್ (ಭುವನೇಂದ್ರ ಕಾಲೇಜು ಕಾರ್ಕಳ) ಡಾ. ಶ್ರೀಧರ ಎಚ್.ಜಿ. (ವಿವೇಕಾನಂದ ಕಾಲೇಜು ಪುತ್ತೂರು) ಡಾ. ರವಿರಾಜ ಶೆಟ್ಟಿ (ಸ.ಪ್ರ. ಕಾಲೇಜು ಅಜ್ಚರಕಾಡು, ಉಡುಪಿ) ಡಾ. ಚಂದ್ರಾವತಿ ಶೆಟ್ಟಿ (ಶಾರದಾ ಕಾಲೇಜು ಬಸ್ರೂರು) ಪ್ರೋ. ಕಾವೇರಿಯಪ್ಪ (ಕಾವೇರಿ ಕಾಲೇಜು, ಗೋಣೆಕೊಪ್ಪಲು), ಡಾ. ಸರಸ್ವತಿ ಡಿ.ಕೆ. (ಸ.ಪ್ರ.ಕಾ. ವಿರಾಜಪೇಟೆ) ಡಾ. ವಸಂತ ಕುಮಾರ್ (ಉಪೆಂದ್ರ ಪೈ ಮೆಮೇರಿಯಲ್ ಕಾಲೇಜು ಉಡುಪಿ) ಇವರನ್ನು ಆಯ್ಕೆ ಮಾಡಲಾಯಿತು.
