ಉಚಿತ ಕೃತಕಾಂಗ ವಿತರಣಾ ಯೋಜನೆಗೆ ಸಂಪನ್ಮೂಲ ಸಂಗ್ರಹ
ಮಂಗಳೂರು: ಲಯನ್ಸ್ ಕ್ಲಬ್ ಮಂಗಳೂರು ಕಂಕನಾಡಿ ಪಡೀಲ್ ವತಿಯಿಂದ ಬೃಹತ್ ಉಚಿತ ಕೃತಕಾಂಗ ವಿತರಣಾ ಯೋಜನೆಗೆ ಸಂಪನ್ಮೂಲ ಸಂಗ್ರಹಣೆಗಾಗಿ ಮಂಗಳೂರಿನ ಸಂತ ಆಲೋಶಿಯಸ್ ಪಿಯು ಕಾಲೇಜಿನ ಗೋನ್ಸಾಂಗ ಮೈದಾನದಲ್ಲಿ ಡಿ.31 2016 ಹೊಸ ವರ್ಷದ ಆಗಮನವನ್ನು ಸಂಭ್ರಮದಿಂದ ಆಚರಿಸುವ ವೈವಿದ್ಯಮಯ ಕಾರ್ಯಕ್ರಮ ಆಯೋಜಿಸಲಾಗಿದೆ. ಚಿತ್ರರಂಗದ ತಾರಾಮಣಿಗಳು ಭಾಗವಹಿಸುವ ಸಂಗೀತ, ನೃತ್ಯ ಮತ್ತಿತರ ಮನೋರಂಜನಾ ಕಾರ್ಯಕ್ರಮವನ್ನು ಸಾದರಪಡಿಸುತ್ತಾರೆ.
ಹೆಸರಾಂತ ಸಿನಿಮಾ ನಿರ್ದೇಶಕ ಸಂದೀಪ್ ಮಲಾನಿ ಅವರ ಮಹಿಳಾ ಸಬಲೀಕರಣ ಕುರಿತ ‘ಸುಳಿಗೆ ಸಿಕ್ಕಿದಾಗ’ ಕನ್ನಡ-ತುಳು ಕಿರುಚಿತ್ರದ ಮೊಟ್ಟ ಮೊದಲ ಪ್ರದರ್ಶನ ಮಂಗಳೂರಿನಲ್ಲಿ ನಡೆಯುತ್ತಿರುವುದು ಕಾರ್ಯಕ್ರಮದ ಪ್ರಮುಖ ಆಕರ್ಷಣೆ. ಸಿನಿಮಾದ ತಾರಾಗಣದಲ್ಲಿರುವ ಬಾಲಿವುಡ್ ತಾರೆ ಕಲ್ಪನಾ ಪಂಡಿತ್, ನಟ ಆಕಾಶ್ ಹೋರ ಮತ್ತು ವಿವೇಕ್ ಪಂಜಾಬಿ ಅವರ ಸಮ್ಮುಖದಲ್ಲಿ ಮೊದಲ ಪ್ರದರ್ಶನ ಏರ್ಪಡಿಸಲಾಗಿದೆ. ನಟ, ಮಾಡೆಲ್ ಅರ್ಜುನ್ ಕಾಫಿಕಾಡ್, ಬಲೇ ತೆಲಿಪಾಲೇ ಟಿವಿ ಶೋ ಖ್ಯಾತಿಯ ಉಮೇಶ್ ಮಿಜಾರ್, ನಟಿ-ಮಾಡೆಲ್ ಸೊನಾಲ್ ಮೊಂತೆರೊ ಮತ್ತು ಡಾನ್ಸ್ ಇಂಡಿಯ ಡಾನ್ಸ್ ಲಿಟ್ಲ್ ಮಾಸ್ಟರ್ ಚಾಂಪಿಯನ್ ಜ್ಞಾನ ಐತಾಳ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮವು ಅಂದು ಸಂಜೆ ಗಂಟೆ ಏಳು ಗಂಟೆಗೆ ಸರಿಯಾಗಿ ಕಿರುಚಿತ್ರದೊಂದಿಗೆ ಆರಂಭವಾಗಲಿದೆ. ಮಕ್ಕಳು, ಯುವಕ-ಯುವತಿಯರು ಮತ್ತು ಕುಟುಂಬದ ಎಲ್ಲಾ ಸದಸ್ಯರನ್ನು ಮನರಂಜಿಸಲು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ರುಚಿಕರವಾದ 80 ಕ್ಕೂ ಹೆಚ್ಚು ಖಾದ್ಯ ಸಹಿತ ವೈವಿಧ್ಯಮಯ ಆಹಾರಗಳೊಂದಿಗೆ ಹೊಸ ವರ್ಷದ ಮೃಷ್ಟಾನ್ನ ಭೋಜನ ನಿಮಗಾಗಿ ಕಾದಿರುತ್ತದೆ. ಮಕ್ಕಳಿಗಾಗಿ ಚಾಕೊಲೇಟ್ ಕಾರಂಜಿ, ನಿಮ್ಮ ಆಯ್ಕೆಯ ಐಸ್ ಕ್ರೀಮ್, ಚಾಟ್ ಕೌಂಟರ್, ವಿಶೇಷ ಕೇಕ್ ಕೌಂಟರ್ ಮತ್ತು ಪ್ಯಾಸ್ಟ್ರಿ ಕೌಂಟರ್ ಮತ್ತು ವಿವಿಧ ರುಚಿಯ ಕೇಕ್ ಕೌಂಟರ್ ನಿಮಗಾಗಿ ತೆರೆದಿರುತ್ತದೆ. ಮೀನಿನ ಔತಣ ಪ್ರಿಯರಿಗಾಗಿ ಪ್ರತ್ಯೇಕವಾಗಿ ವಿವಿಧ ಮೀನುಗಳ ಹಲವು ಖಾದ್ಯಗಳ ಕೌಂಟರುಗಳು ಇರುತ್ತವೆ.
mothimahal 1

mothimahal 4

mothimahal 6

mothimahal 7

mothimahal 9
ಎಲ್ಲರನ್ನು ನರ್ತಿಸುವಂತೆ ಮಾಡುವ ಡಿಜೆ ತೇಜು ಅವರ ಸುಮಧುರ ಸಂಗೀತ ಸಂಯೋಜನೆಯೊಂದಿಗೆ ಬಾಲಿವುಡ್ ಪ್ರತಿಭೆಗಳಾದ ಆಕಾಶ್ ವೋಹ್ರಾ, ವಿವೇಕ್ ಪಂಜಾಬಿ ಮತ್ತು ಕ್ಲೆಮೆಂಟ್ ಸಿಕ್ವೇರ ಅವರಿಂದ ಮನೊರಂಜನಾ ಕಾರ್ಯಕ್ರಮಗಳು, ಹೊಸ ತುಳು ಸಿನಿಮಾ ಚಂಡಿಕೋರಿ ಚಿತ್ರದ ಹಾಡುಗಳಿಗೆ ಡಾನ್ಸ್ ಮಾಡಲಿರುವ ನಟ ಅರ್ಜುನ್ ಕಾಪಿಕಾಡ್ ಕಾರ್ಯಕ್ರಮದ ಆಕರ್ಷಣೆ. ಮಲಾನಿ ಟಾಕೀಸ್ ಅವರಿಂದ ‘ಯಶ್ ರಾಜ್ ಹೀರೋಯಿನ್ಸ್ ದೇ ಜಾಯೆಂಗೆ’ ಸಂಗೀತ ಕಾರ್ಯಕ್ರಮ, ಲಿಟ್ಲ್ ಮಾಸ್ಟರ್ ಖ್ಯಾತಿಯ ಜ್ಞಾನ ಐತಾಳ್ ಮತ್ತು ತಂಡದಿಂದ ಜನಪ್ರಿಯ ಹಾಡುಗಳು, ಲಿಯೋ ತಂಡದಿಂದ ವೇಸ್ಟರ್ನ್ ಡಾನ್ಸ್, ಮಕ್ಕಳ ಫ್ಯಾಷನ್ ಶೋ ಏರ್ಪಡಿಸಲಾಗಿದೆ. ಜನಪ್ರಿಯ ಜಾದೂಗಾರರಿಂದ ಮ್ಯಾಜಿಕ್ ಶೋ, ಸ್ಥಳದಲ್ಲೇ ಕ್ಯಾರಿಕೇಚರ್ ರಚನೆ, ಹಸ್ತಸಾಮುದ್ರಿಕೆ, ಮೆಹಂದಿ,ಟ್ಯಾಟ್ಟೂ ಇತ್ಯಾದಿಯೊಂದಿಗೆ ಆಕರ್ಷಕ ಸಿಡಿಮದ್ದು ಪ್ರದರ್ಶನವಿರುತ್ತದೆ. ಮಕ್ಕಳ ಗೇಮ್ಸ್ ಗಾಗಿ ಪ್ರತ್ಯೇಕ ಸ್ಥಳ, ಮಹಿಳೆಯರಿಗೆ ವಿಶೇಷ ಸ್ಛಳಾವಕಾಶ ಮೀಸಲಿರಿಸಲಾಗಿದೆ. ನಿಮ್ಮ ಮೆಚ್ಚಿನ ಚಿತ್ರ
ತಾರೆಯರನ್ನು ಭೇಟಿಯಾಗಲು, ಆಟೋಗ್ರಾಫ್ ಪಡೆಯಲು, ಸೆಲ್ಫಿ ಚಿತ್ರಗಳನ್ನು ತೆಗೆಯಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಸ್ಥಳದಲ್ಲೇ ಅದೃಷ್ಟಶಾಲಿಗಳಿಗೆ ಬಹುಮಾನ, ಲಕ್ಕಿ ಡ್ರಾ, ಸ್ಥಳದಲ್ಲೇ ಗೇಮ್ಸ್ ಇತ್ಯಾದಿ ಮೂಲಕ ಹಲವಾರು ಆಕರ್ಷಕ ಬಹುಮಾನಗಳನ್ನು ಪಡೆಯುವ ಅವಕಾಶವಿದೆ. ಎಲ್ಲ ರೀತಿಯ ಸುರಕ್ಷತೆ ಮತ್ತು ಭದ್ರತೆ ವ್ಯವಸ್ಥೆ. ವೈದ್ಯರು, ಆಂಬುಲೆನ್ಸ್ ಮತ್ತು ಆರೋಗ್ಯ ಸುರಕ್ಷ ಸೌಲಭ್ಯಗಳನ್ನು
ಮೈದಾನದಲ್ಲಿ ಒದಗಿಸಲಾಗಿದೆ. ವಿಶಾಲ ಪಾರ್ಕಿಂಗ್ ಜಾಗವನ್ನು ಹೊಂದಿರುವ ನಗರದ ಹೃದಯ ಭಾಗದಲ್ಲಿರುವ ಪ್ರಶಾಂತ ಪ್ರಕೃತಿಯ ನಡುವಿನಲ್ಲಿರುವ ಅತ್ಯಂತ ಪ್ರಶಸ್ತ ಸ್ಥಳದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಲಯನ್ಸ್ ಸದಸ್ಯರು ಮಾತ್ರವಲ್ಲದೆ ಎಲ್ಲಾ ವರ್ಗದ ಸಾರ್ವಜನಿಕರು, ಮಕ್ಕಳು, ಯುವಕ ಯುವತಿಯರೊಂದಿಗೆ ಎಲ್ಲ ವಯೋಮಾನದ ಕುಟುಂಬ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಲಯನ್ಸ್ ಅಧ್ಯಕ್ಷೆ ಲಯನ್ ಆಶಾ ಸಿ ಶೆಟ್ಟಿ ನೇತೃತ್ವದಲ್ಲಿ ಲಯನ್ ಎಸಿ ಶೆಟ್ಟಿ ಅಧ್ಯಕ್ಷರಾಗಿ, ಲಯನ್ ಎಂಸಿ ಶೆಟ್ಟಿ ಕಾರ್ಯದರ್ಶಿ, ಲಯನ್ ರಘುರಾಮ ಶೆಟ್ಟಿ ಖಜಾಂಚಿ ಒಳಗೊಂಡ ಸಮಿತಿಯು ಹೊಸ ವರ್ಷಾಚರಣೆಯ ಸಂಭ್ರಮದ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.
ಪ್ರವೇಶ ಪತ್ರ. ವಿವರಗಳಿಗಾಗಿ ಸಂಪರ್ಕಿಸಿ: ಮೆಸ್ಚ್ರೋ ಇವೆಂಟ್ಸ್ ಆಂಡ್ ಎಕ್ಸಿಬಿಷನ್, ಗೋಲ್ಡ್ ಫಿಂಚ್ ಕಾಂಪ್ಲೆಕ್ಸ್, ಮಂಗಳೂರು: ಮೊಬೈಲ್: ಲI ಎ.ಸಿ ಶೆಟ್ಟಿ 98453 53312, ಲI ಕೆನ್ಯುಟ್ ಫೆರ್ನಾಂಡಿಸ್, 99454 74090
ಇಮೇಲ್: iಟಿಜಿo@mಚಿesಣಡಿoಛಿoಡಿಠಿoಡಿಚಿಣioಟಿ.iಟಿ ಲಯನ್ಸ್ ಕ್ಲಬ್ ಮಂಗಳೂರು ಕಂಕನಾಡಿ ಪಡೀಲ್ ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್, 210 ದೇಶಗಳಲ್ಲಿ 46000 ಕ್ಲಬ್ ವ್ಯಾಪಿಸಿರುವ 1.4 ಮಿಲಿಯನ್
ಸದಸ್ಯರೊಂದಿಗೆ ವಿಶ್ವದ ಅತಿದೊಡ್ಡ ಸೇವಾ ಸಂಸ್ಥೆಯನ್ನು ಲಯನ್ ಮೆಲ್ವಿನ್ ಜೋನ್ಸ್ 1917 ರಲ್ಲಿ ಸ್ಥಾಪಿಸಿದರು.ಲಯನ್ ಸೇವಾ ಸಂಸ್ಥೆಯು 100 ನೇ ವರ್ಷದ ಪ್ರವೇಶಿಸುವ ಸನಿಹದಲ್ಲಿದೆ. ಲಯನ್ಸ್ ಕ್ಲಬ್ 55 ವರ್ಷಗಳಿಂದ ಭಾರತದಲ್ಲಿ ಸಕ್ರಿಯವಾಗಿದೆ. ಲಯನ್ಸ್ ಕ್ಲಬ್ ಮಂಗಳೂರು ಕಂಕನಾಡಿ ಪಡೀಲ್ ಲಯನ್ಸ್ ಜಿಲ್ಲಾ 317ಆ ಒಂದು ಘಟಕ, ಅಂದಿನಿಂದ 1978 ರಲ್ಲಿ ಸನ್ನದನ್ನು ನಾವು ಸಮಾಜಕ್ಕೆ ಮುಖ್ಯವಾಗಿ ಬಡ ಮತ್ತು ಉಚಿತ ಕಣ್ಣಿನ ಚಿಕಿತ್ಸಾ ಶಿಬಿರಗಳನ್ನು ನಡೆಸುವುದು ಮುಂತಾದ ಚಟುವಟಿಕೆಗಳ ಮೂಲಕ ಮತ್ತು ಮಂಗಳೂರು ಸುತ್ತ ನಿರ್ಗತಿಕರಿಗೆ ಜಮೀನುದಾರ ಸೇವೆ ಸಲ್ಲಿಸುತ್ತಿದೆ, ಆರೋಗ್ಯ ತಪಾಸಣೆ ಕೃತಕ ಅಂಗಗಳ ದಾನ, ರಕ್ತದಾನ, ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಮತ್ತು ಶಾಲೆಗಳಿಗೆ ಶೌಚಾಲಯಗಳ ನಿರ್ಮಾಣದ, ಮಕ್ಕಳು ಮತ್ತು ಶಾಲೆಗಳ ದತ್ತು ಸ್ವೀಕಾರ, ನಿರ್ಗತಿಕರಿಗೆ ಮನೆ ನಿರ್ಮಾಣ, ಕುಡಿಯುವ ನೀರು ಪೂರೈಕೆ ಸೌಲಭ್ಯ, ಬಸ್ ವೈಟಿಂಗ್ ಶೆಲ್ಟರ್ ನಿರ್ಮಾಣ ಮತ್ತು ಅನಾಥಾಶ್ರಮಗಳ ನಿರ್ಮಾಣ ಸಹಿತ ಜನರಿಗೆ ಅಗತ್ಯವಿರುವ ಸೇವೆಗಳನ್ನು ನೀಡುತ್ತಿದೆ. ಇಂತಹ ಕಾರ್ಯಗಳ ಮೂಲಕ ನಮ್ಮ ಕ್ಲಬ್ ಗೌರವದ ಸ್ಥಾನವನ್ನು ಪಡೆದಿದ್ದು, ಜಿಲ್ಲಾ 317ಆ ರಲ್ಲಿ ಅಂತ್ಯಂತ ಚಟುವಟಿಕೆಯಿಂದ ಇರುವ ಕ್ಲಬ್ಬುಗಳಲ್ಲಿ ಒಂದಾಗಿದೆ. ಮುಂಬರುವ ಲಯನ್ಸ್ ಅಂತಾರಾಷ್ಟ್ರೀಯ ಶತಮಾನೋತ್ಸವದ ಹಿನ್ನೆಲೆಯಲ್ಲಿ ಡಯಾಲಿಸಿಸ್ ಕೇಂದ್ರವನ್ನು ನಡೆಸುತ್ತಿರುವ ಲಯನ್ಸ್ ಜಿಲ್ಲಾ 317ಆ ಸೇವಾ ಟ್ರಸ್ಟ್ (ರಿ) ಸಂಸ್ಥೆಯನ್ನು ಬೆಂಬಲಿಸಲು ಮತ್ತು ಸಮಾಜದ ಅತ್ಯಂತ ಬಡಜನರು ಜೀವನ ಸಾಗಿಸಲು ದೇಣಿಗೆ ಮೂಲಕ ನೆರವಾಗುವದರೊಂದಿಗೆ 100 ಮಂದಿ ಅಂಗವಿಕಲ ವ್ಯಕ್ತಿಗಳಿಗೆ ಕೃತಕ ಅಂಗಗಳು ವಿತರಿಸಲು ಒಂದು ಮೆಗಾ ಕೃತಕ ಅವಯವ ದಾನ ಯೋಜನೆಯನ್ನು ಅನುಷ್ಠಾನ ಮಾಡುವುದು ನಮ್ಮ ಉದ್ದೇಶವಾಗಿದೆ. ಪತ್ರಿಕಾ ಪ್ರಕಟಣೆ ‘ಸುಳಿಗೆ ಸಿಕ್ಕಿದಾಗ’ ಕನ್ನಡ-ತುಳು ಚಲನಚಿತ್ರದ ಮೊದಲ ಪ್ರದರ್ಶನ ಸಂದೀಪ್ ಮಲಾನಿ ನಿರ್ದೇಶನದ 45 ನಿಮಿಷಗಳ ಅವಧಿಯ ಕನ್ನಡ-ತುಳು ಕಿರು ಚಲನಚಿತ್ರ ಸುಳಿಗೆ ಸಿಕ್ಕಿದಾಗ ಈಗಾಗಲೇ ಚಿತ್ರವಿಮರ್ಶಕರ ಪ್ರಶಂಸೆಗೆ ಪಾತ್ರವಾಗಿದೆ. ಬಾಲಿವುಡ್ ನಟಿ ಕಲ್ಪನಾ ಪಂಡಿತ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಕಿರುಚಿತ್ರ ಮಹಿಳಾ ಸಬಲೀಕರಣಕ್ಕೊಂದು ಕೊಡುಗೆಯಾಗಿದೆ. ಸಬಲೇಯಾದ ಮಹಿಳೆ ಎಲ್ಲ ಅಡೆತಡೆಗಳನ್ನು, ತೊಂದರೆಗಳನ್ನು ಎದುರಿಸಿ ತನ್ನ ಸ್ವಂತ ಕಾಲುಗಳ ಮೇಲೆ ನಿಂತು ತೋರಿಸಬಲ್ಲಲು ಎಂಬುದನ್ನು ಮಲಾನಿ ಅವರ ಚಿತ್ರ ಪ್ರತಿಪಾದಿಸುತ್ತದೆ. ಕಿರುಚಿತ್ರವನ್ನು ಅಮೆರಿಕ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದ್ದು, ಚಿತ್ರದಲ್ಲಿ ತುಳು ಮಾತನಾಡುವ ಕೆಲವು ಪಾತ್ರಗಳು ನಮ್ಮ ಕರಾವಳಿಯ ಸ್ಪರ್ಶವನ್ನು ಚಿತ್ರಕ್ಕೆ ನೀಡಿದೆ. ಹೊಸದಾಗಿ ಇಂಗ್ಲೀಷ್ ಕವನದ ತುಣುಕುಗಳನ್ನು ಸೇರಿಸಿ ತುಳುವಿನ ಪ್ರಸಿದ್ಧ ದಾಣೇ ಪೊಣ್ಣೆ ಎಂಬ ಹಾಡನ್ನು ಚಿತ್ರದಲ್ಲಿ ಅಳವಡಿಸಲಾಗಿದೆ. ಕಲ್ಪನಾ ಪಂಡಿತ್ ನಾಯಕಿಯಾಗಿ ಅಭಿನಯಿಸಿದ್ದು, ವಿವೇಕ್ ಪಂಜಾಬಿ, ಆಕಾಶ್ ಹೋರ, ಕ್ಲೆಮೆಂಟ್ ಸಿಕ್ವೇರ
ಎಂಬ ಮೂರು ಹೊಸಬರನ್ನು ಪರಿಚಯಿಸಲಾಗುತ್ತಿದೆ. ಕ್ಲಿಫ್ ಜಾಂಕೆ ಚಿತ್ರದ ಕಾರ್ಯಕಾರಿ ನಿರ್ಮಾಪಕ. ಚಿತ್ರದ ತಾರಾಬಳಗದಲ್ಲಿ ಮಂಗಳೂರು ಮೀನಾ ಮಲಾನಿ, ಚರಣ್ ಸುವರ್ಣ, ಕ್ಸೇವಿಯರ್ ಫೆರ್ನಾಂಡಿಸ್ , ರೊಸ್ಲಿನ್ ಸಿಕ್ವೇರಾ, ಐವಿ ಫೆರ್ನಾಂಡಿಸ್, ಗ್ಯಾಡ್ವಿನ್ ಫೆರ್ನಾಂಡಿಸ್, ಸಿಲ್ವರ್ ಮಲಾನಿ, ಮರೀನಾ ರೂಪಾ, ಪ್ರಿಯಾ ನೊರೊನ್ಹಾ ಮತ್ತಿತರರು ಇದ್ದಾರೆ. ನಿತಿನ್ ಆಚಾರ್ಯ ಚಿತ್ರಕ್ಕಾಗಿ ಎರಡು ಹಾಡುಗಳನ್ನು ರಚಿಸಿದ್ದಾರೆ. ಸಂಭಾಷಣೆ ಬರೆದಿರುವ ಲಲಿತಾ ರಾಜಗೋಪಾಲ್ ಚಲನಚಿತ್ರದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಸಂತೋಷ್ ಚಾವ್ಲಾ ಚಿತ್ರದ ಎಡಿಟಿಂಗ್ ಮಾಡಿದ್ದು, ಕಲ್ಪನಾ ಪಂಡಿತ್ ಕಥೆಯನ್ನು ಹೊಂದಿದ್ದು, ಸಂದೀಪ್ ಮಲಾನಿ ಚಿತ್ರಕತೆ ರಚಿಸಿ ನಿರ್ದೇಶಿಸಿದಗ್ದಾರೆ.ಕಲ್ಪನಾ ಪಂಡಿತ್ ಜೊತೆ ಸಂದೀಪ್ ಮಲಾನಿ ನಿರ್ಮಿಸಿರುವ ಮೂರನೇ ಚಿತ್ರ ಇದಾಗಿದೆ. ‘ಜೋ ಜೋ ಲಾಲಿ’ ಎಂಬ ಎಚ್‍ಐವಿ ಏಡ್ಸ್ ಜಾಗೃತಿ ಚಿತ್ರ ಒಟ್ಟು 14 ಪ್ರಶಸ್ತಿಗಳನ್ನು ಗೆದ್ದುಕೊಂಡಿದಲ್ಲದೆ, ಭಾರತದಾದ್ಯಂತ ಪ್ರದರ್ಶನಗೊಂಡು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿತವಾಗಿದೆ. ಎರಡನೆಯ ಚಿತ್ರ ಹಿಂದಿಯಲ್ಲಿ ನಿರ್ಮಿಸಲಾದ ಲಾನ್ಲೇವ 555 ಉತ್ತರ ಭಾರತದ ಚಿತ್ರಮಂದಿರಗಳಲ್ಲಿ 150 ದಿನಗಳ ಪ್ರದರ್ಶನ ಕಂಡಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಪ್ರೇಕ್ಷಕರು, ಮಾಧ್ಯಮದವರು ಮತ್ತು ಚಿತ್ರರಂಗದವರು ಚಿತ್ರದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿ ಪ್ರಶಂಸಿಸಿದ್ದಾರೆ. ಸುಳಿಕೆ ಸಿಕ್ಕಿದವರು ಚಿತ್ರತಂಡದ ಅದ್ಭುತ ಕೆಲಸಕ್ಕೆ ಕನ್ನಡ ಸಿನಿಮಾರಂಗದ ಹಿರಿಯರಾದ ಪಾರ್ವತಮ್ಮ ರಾಜಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ. ಚಿತ್ರಪ್ರದರ್ಶನದ ಅನಂತರ ಹಿರಿಯ ನಟಿ ಜಯಂತಿ, ಗಿರಿಜಾ ಲೋಕೇಶ್, ರಾಷ್ಟ್ರೀಯ ಪ್ರಶಸ್ತಿ ನಟ ಸಂಚಾರಿ ವಿಜಯ್ ಅವರೊಂದಿಗೆ ಪಾರ್ವತಮ್ಮ ಅವರನ್ನು ಚಿತ್ರತಂಡದ ವತಿಯಿಂದ ಗೌರವಿಸಲಾಯಿತು. ಈಗ ಹೊಸ ವರ್ಷದ ಮುನ್ನಾದಿನ ಡಿಸೆಂಬರ್ 31ರಂದು ಮಂಗಳೂರು ಅಲೋಶಿಯಸ್ ಪಿಯು ಕಾಲೇಜು ಮೈದಾನದಲ್ಲಿ ಲಯನ್ಸ್ ಕ್ಲಬ್ ಕಂಕನಾಡಿ ಪಡೀಲ್ ಆಶ್ರಯದಲ್ಲಿ ಪ್ರಥಮ ಪ್ರದರ್ಶನ ಮಾಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ಹೊಸ ವರ್ಷ ಆಚರಣೆ ಅಂಗವಾಗಿ ಮಲಾನಿ ಟಾಕೀಸ್ ವತಿಯಿಂದ ಯಶ್ ರಾಜ್ ಹೀರೋಯಿನ್ಸ್ ಡೇ ಜಾಯೆಂಗೆ’ ಎಂಬ ಸಂಗೀತ ಕಾರ್ಯಕ್ರಮವನ್ನು ಸಾದರಪಡಿಸಲಿದ್ದಾರೆ.

By suddi9

Leave a Reply

Your email address will not be published. Required fields are marked *