ಮುಂಬಯಿ: ಗುರು ಸ್ಮೀತಾ ಎಂ.ನಾಯರ್ ನಲಸೋಫರಾ ಅವರ ಶಿಷ್ಯೆಯರಾದ ಕು| ಕೀರ್ತಿಶ್ರೀ ಭಾಸ್ಕರ್ ಹೊಸಬೆಟ್ಟು, ಕು| ನಿಶಾ ಪಿ.ಕುಲಾಲ್ ಭರತನಾಟ್ಯ ರಂಗ ಪ್ರವೇಶಗೈದರು.

ಇಂದಿಲ್ಲಿ ಆದಿತ್ಯವಾರ ಅಪರಾಹ್ನ ಮಾಟುಂಗಾ ಪಶ್ಚಿಮದಲ್ಲಿನ ಡಾ|ಎಂ.ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ದಿ| ಕೆ.ಪಿ.ಜಿ ನಾಯರ್ ಸ್ಥಾಪಕತ್ವದ ಕಲಾ ಕ್ಷೇತ್ರ ಡ್ಯಾನ್ಸ್ ಅಕಾಡೆಮಿ ನಲಸೋಫರಾ ಸಂಸ್ಥೆಯು ಆಯೋಜಿಸಲಾಗಿದ್ದ ಭರತನಾಟ್ಯ ಅರಂಗ್ರೇಟಂ ಕಾರ್ಯಕ್ರಮದಲ್ಲಿಕು| ಕೀರ್ತಿಶ್ರೀ ಭಾಸ್ಕರ್ ಮೂಲ್ಯ, ಕು| ನಿಶಾ ಕುಲಾಲ್ ಜೊತೆಯಲ್ಲಿ ಕು| ಅನನ್ಯ ಸಿಂಗ್ಮತ್ತುಕು| ನುರ್ವೀಮಾಂಡ್ರೆ ಅವರೂ ಭರತನಾಟ್ಯ ರಂಗ ಪ್ರವೇಶಗೈದರು.ಅತಿಥಿಗಳಾಗಿ ಓಂದಾಸ್ ಕಣ್ಣಂಗಾರ್ ಗಿರೀಶ್ ಬಿ.ಸಾಲ್ಯಾನ್, ನಾಗೇಶ್ಕುಮಾರ್ ಪೊಳಲಿ, ರಾಜ್ಕುಮಾರ್ ಕಾರ್ನಾಡ್ ಉಪಸ್ಥಿತರಿದ್ದರು. ಮಂಜುನಾಥ್ ಶೆಟ್ಟಿಗಾರ್, ಭಾಸ್ಕರ್ ಮೂಲ್ಯ ಹೊಸಬೆಟ್ಟುಕುಳಾಯಿ, ಇಂದಿರಾ ಬಿ.ಮೂಲ್ಯ, ಎನ್.ಎನ್ ಶಿವಪ್ರಸಾದ್, ಸತೀಶ್ ಕೃಷ್ಣಮೂರ್ತಿ, ನಾರಾಯಣ್ ಪಾರ್ಥಸಾರಥಿ,ಸಿ.ಆರ್ ಕೃಷ್ಣನ್, ಎಸ್.ವಿ ನಾರಾಯಣನ್ ಸಹಯೋಗ ದೊಂದಿಗೆ ರಂಗ ಪ್ರವೇಶ ಕಾರ್ಯಕ್ರಮ ನೆರವೇರಿತು. ಕು| ಸಜನಿ ಕೊಚುನ್ನೀ ಸ್ವಾಗತಿಸಿ ಕಲಾವಿದರನ್ನು ಪರಿಚಯಿಸಿದರು. ಸತೀಶ್ ಎರ್ಮಾಳ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.













