ಸುದ್ದಿ9 ಮಂಗಳೂರು: ನೀರಿನ ತೊಟ್ಟಿಗೆ ಬಿದ್ದ ನಾಲ್ಕರ ಹರೆಯದ ಮಗುವೊಂದನ್ನು ಆರರ ಬಾಲಕನೊಬ್ಬ ಅಪೂರ್ವ ಸಮಯಪ್ರಜ್ಞೆ ಮೆರೆದು ಬದುಕಿಸಿದ ವಿಶಿಷ್ಟ ಘಟನೆ ತೊಕ್ಕೊಟ್ಟು ಸಮೀಪದ ಮಂಚಿಲದಲ್ಲಿ ನಡೆದಿದೆ. ಕೆ.ಸಿ.ರೋಡ್ ನಿವಾಸಿ ಎಂ. ಮಹಮ್ಮದ್ ಅವರ ಪುತ್ರ ಇಬ್ರಾಹಿಂ ಮಹಮ್ಮದ್ ರಫಿ (4) ಅಪಾಯಕ್ಕೆ ಸಿಲುಕಿದ ಮಗುವಾದರೆ, ಮಹಮ್ಮದ್ ಮುಸ್ತಾಫ ಮತ್ತು ಮೈಮುನಾ ದಂಪತಿಯ ಮಗ ಮಹಮ್ಮದ್ ಆಫ್ರಾನ್ (6) ಆತನನ್ನು ಬದುಕಿಸಿ ಸಾಹಸ ಮೆರೆದ ಬಾಲಕ.

balakananu kapadida bala
balakananu kapadida bala

ಘಟನೆ ವಿವರ: ಎಂ. ಮಹಮ್ಮದ್ ಅವರು ಶುಭ ಕಾರ್ಯನಿಮಿತ್ತ ತೊಕ್ಕೊಟ್ಟು ಮಂಚಿಲದಲ್ಲಿರುವ ಪತ್ನಿ ತವರು ಮನೆಗೆ ಭಾನುವಾರ ಬಂದಿದ್ದರು. ಸೋಮವಾರ ಮಧ್ಯಾಹ್ನ ಮಹಮ್ಮದ್ ಅವರ ಪುತ್ರ ಇಬ್ರಾಹಿಂ ಮಹಮ್ಮದ್ ರಾಫಿ(4) ಹಾಗೂ ಮಹಮ್ಮದ್ ಅವರ ನಾದಿನಿ ಮೈಮುನಾ ಅವರ ಮಗ ಮಹಮ್ಮದ್ ಅಫ್ರಾನ್(6) ಮನೆಯ ಪಕ್ಕದಲ್ಲಿಯೇ ನಿಮರ್ಾಣವಾಗುತ್ತಿರುವ ಮನೆಯೊಂದರ ಆವರಣದಲ್ಲಿ ಆಟವಾಡುತ್ತಿದ್ದರು.

ಈ ವೇಳೆ, ರಾಫಿ ಆಯತಪ್ಪಿ ನೀರಿನ ತೊಟ್ಟಿಗೆ ಬಿದ್ದಿದ್ದ. ಅಫ್ರಾನ್ ಆತನನ್ನು ಮೇಲಕ್ಕೆತ್ತಲು ಪ್ರಯತ್ನಿಸಿದನಾದರೂ ಸಾಧ್ಯವಾಗದೆ ಇದ್ದಾಗ ಮನೆಗೆ ಓಡುತ್ತಾ ಬಂದು ವಿಷಯ ತಿಳಿಸಿದ್ದಾನೆ. ತಕ್ಷಣ ಮನೆ ಮಂದಿ ಮಗುವನ್ನು ಮೇಲೆತ್ತಿ ಪ್ರಥಮ ಚಿಕಿತ್ಸೆ ನೀಡಿ ತೊಕ್ಕೊಟ್ಟಿನ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಪರಿಸ್ಥಿತಿ ಗಂಭೀರವಾಗಿದ್ದರಿಂದ ದೊಡ್ಡ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು. ಕೂಡಲೇ ಸಮೀಪದ ದೇರಳಕಟ್ಟೆ ಆಸ್ಪತ್ರೆಗೆ ಮಗುವನ್ನು ದಾಖಲಿಸಿ ಚಿಕಿತ್ಸೆ ನೀಡಲಾಯಿತು. ದೇಹ ಸ್ಥಿತಿ ಗಂಭೀರವಾಗಿದ್ದರಿಂದ ಒಂದು ದಿನ ತೀವ್ರ ನಿಗಾ ವಿಭಾಗದಲ್ಲಿಟ್ಟು, ಚೇತರಿಸಿಕೊಂಡ ಬಳಿಕ ಗುರುವಾರ ಬಿಡುಗಡೆ ಮಾಡಲಾಗಿದೆ.

ಯಾರೂ ಇರಲಿಲ್ಲ: ನೂತನ ನಿಮರ್ಾಣದ ಮನೆಯ ಕೆಲಸಕ್ಕೆ ನೀರಿನ ಅಭಾವ ಇದ್ದುದರಿಂದ ಸೋಮವಾರ ಕೆಲಸಗಾರರು ಬಂದಿರಲಿಲ್ಲ. ಮಕ್ಕಳು ಆಟವಾಡುತ್ತಿದ್ದಾಗ ಟ್ಯಾಂಕರ್ನಲ್ಲಿ ತಂದ ನೀರನ್ನು ತೊಟ್ಟಿಗೆ ಹಾಯಿಸಲಾಗಿತ್ತು. ಮಕ್ಕಳು ಇದನ್ನು ಗಮನಿಸಿದ್ದರು. ಬಳಿಕ ಕೈಕಾಲು ತೊಳೆಯಲೆಂದು ತೊಟ್ಟಿಯತ್ತ ಕಾಲು ಇಳಿಸಿ ರಾಫಿ ಕಾಲು ಜಾರಿ 4.5 ಅಡಿ ಆಳದ ನೀರಿಗೆ ಬಿದ್ದಿದ್ದಾನೆ.

ಅಫ್ರಾನ್ ಬೊಬ್ಬೆ ಹೊಡೆದರೂ ಯಾರಿಗೂ ಕೇಳಿಸಿರಲಿಲ್ಲ. ಪರಿಸರದಲ್ಲಿ ಕೆಲವರು ನಿದ್ರೆಗೆ ಶರಣಾಗಿದ್ದರೆ, ಕೆಲವರು ಟೀವಿ ನೋಡುವುದರಲ್ಲಿ ಮಗ್ನರಾಗಿದ್ದರು. ಆದರೆ, ಸಮಯ ಹಾಳು ಮಾಡದ ಅಫ್ರಾನ್ ಸುಮಾರು 150 ಮೀ. ದೂರದಲ್ಲಿರುವ ಮನೆಯತ್ತ ಓಡಿ ಕೂಡಲೇ ವಿಷಯ ತಿಳಿಸಿದ್ದಾನೆ. ತಕ್ಷಣ ಮನೆ ಮಂದಿ ಧಾವಿಸಿ ನೋಡಿದಾಗ ಅದಾಗಲೇ ರಾಫಿ ಮೂಛರ್ೆ ತಪ್ಪಿ ನೀರಿನಲ್ಲಿ ತೇಲುತ್ತಿದ್ದ. ಮನೆ ಮಂದಿಗೆ ವೈದ್ಯಕೀಯ ಚಿಕಿತ್ಸೆ ಬಗ್ಗೆ ಸ್ವಲ್ಪ ಜ್ಞಾನವಿದ್ದುದರಿಂದ ಪ್ರಥಮ ಚಿಕಿತ್ಸೆ ನೀಡಿದರು. ಬಳಿಕ ಆಸ್ಪತ್ರೆಗೆ ದಾಖಲಿಸಿದರು.

ಇದೀಗ ರಾಫಿ ಗುಣಮುಖನಾಗಿದ್ದರೂ ಮಂಕು ಕವಿದಂತಿದ್ದಾನೆ. ರಾಫಿಯನ್ನು ಬದುಕಿಸಿದ ಕಿಅಫ್ರಾನ್ ಉಳ್ಳಾಲ ಹಳೆಕೋಟೆಯ ಹಝ್ರತ್ ಸಯ್ಯದ್ ಮದನಿ ಉದರ್ು ಹಿರಿಯ ಪ್ರಾಥಮಿಕ ಶಾಲೆಯ ಒಂದನೇ ತರಗತಿ ವಿದ್ಯಾಥರ್ಿ. ಆತನ ಸಮಯ ಪ್ರಜ್ಞೆ, ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಶಿಕ್ಷಕರು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

By suddi9

Leave a Reply

Your email address will not be published. Required fields are marked *