ಬಂಟ್ವಾಳ: ಬೊಂಡಾಲ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಕರ್ನಾಟಕ ಬ್ಯಾಂಕ್ ಕೊಡುಗೆಯಾಗಿ ನೀಡಿದ ಸೌರ ವಿದ್ಯುತ್ ಘಟಕವನ್ನು ಬ್ಯಾಂಕಿನ ಎಜೆಎಂ ವಿಶ್ವನಾಥ್ ಅವರು ಶನಿವಾರ ಉದ್ಘಾಟಿಸಿದರು.

ಬ್ಯಾಂಕ್ ನ ಗೋಳ್ತಮಜಲು ಶಾಖಾಧಿಕಾರಿ ಪ್ರವೀಣ್ ಕುಮಾರ್,ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಜಯರಾಮ ಹೊಳ್ಳ ನಾಗ್ತಿಮಾರು, ತಂತ್ರಿಗಳಾದ ಮಾದಕಟ್ಟೆ ಈಶ್ವರ ಭಟ್, ಅರ್ಚಕ ಶಿವಪ್ರಸಾದ್ ಭಟ್, ಟ್ರಸ್ಟ್ ಸದಸ್ಯರಾದ ದಯಾನಂದ ಕುಮಾರ್, ಪ್ರವೀಣ್ ಅಮೀನ್, ವಸಂತ ಅಂಚನ್, ಹಾಗೂ ಸುಬ್ರಹ್ಮಣ್ಯ ಭಟ್ ಕಲ್ಲಡ್ಕ, ರಾಜರಾಮ ಐತಾಳ, ದೇವದಾಸ ಶೆಟ್ಟಿಗಾರ್ ಉಪಸ್ಥಿತರಿದ್ದರು.
