ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ವಿಟ್ಲ ಇದರ ಕಲ್ಲಡ್ಕ ವಲಯದ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಕಲ್ಲಡ್ಕ ಘಟಕದ ಮಾಸಿಕ ಸಭೆಯು ಘಟಕದ ಅಧ್ಯಕ್ಷ ಗಣೇಶ್ ನೆಟ್ಲ ರವರ ಅಧ್ಯಕ್ಷತೆಯಲ್ಲಿ ಕಲ್ಲಡ್ಕ ವಲಯ ಯೋಜನಾ ಕಚೇರಿಯಲ್ಲಿ ನಡೆಸಲಾಯಿತು.

ಸಭೆಯಲ್ಲಿ ಶೌರ್ಯ ತಂಡದ ಮುಂದಿನ ಸೇವಾ ಕಾರ್ಯಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು
ಸಭೆಯಲ್ಲಿ ಘಟಕದ ನಿಕಟ ಪೂರ್ವ ಅಧ್ಯಕ್ಷ ಮಾದವ ಸಾಲಿಯನ್ ಕುದ್ರಬೆಟ್ಟು, ಸದಸ್ಯರುಗಳಾದ ರವಿಚಂದ್ರ, ವೆಂಕಪ್ಪ ಜಿ,ಸಂತೋಷ್, ಚಿನ್ನಾ ಕಲ್ಲಡ್ಕ, ರಮೇಶ್ ಕುದ್ರೆಬೆಟ್ಟು, ಸತೀಶ್,ಧನಂಜಯ, ತುಳಸಿ, ಹರೀಶ್ ಮೊದಲಾದವರು ಉಪಸ್ಥಿತರಿದ್ದರು
