ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ೬ನೇ ತರಗತಿಯ ವಿದ್ಯಾರ್ಥಿನಿ ಶ್ರಾವಣಿದೀಪ ಆನ್ ಲೈನ್‌ನಲ್ಲಿ ನಡೆದ ಭಗವದ್ಗೀತಾ ಪಾರಾಯಣದಲ್ಲಿ ಚಿನ್ನದ ಪದಕವನ್ನು ಪಡೆದು, ಹರಿಯಾಣದ ಕುರುಕ್ಷೇತ್ರದಲ್ಲಿ ಸಹಸ್ರ ಗೀತಾ ಕಂಠನಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದಿರುತ್ತಾಳೆ.
 

ಕಳೆದ ವರ್ಷ ಉಡುಪಿಯಲ್ಲಿ ನಡೆದ ಲಕ್ಷ ಕಂಠ ಗೀತ ಗಾಯನದಲ್ಲಿ ಭಾಗವಹಿಸಿರುತ್ತಾಳೆ. ಗೀತಾ ಪರಿವಾರದ ಸಂಸ್ಥಾಪಕರಾದ ಸ್ವಾಮಿ ಶ್ರೀ ಗೋವಿಂದ ದೇವ್ ಗಿರಿ ಮಹಾರಾಜರ ಗೀತಾ ಪರಿವಾರದ ಬಳಗದಲ್ಲಿ ಸೇರಿ ಭಗವದ್ಗೀತೆಯ ಅಭ್ಯಾಸವನ್ನು ಉಮಾರಾವ್ ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡುತ್ತಿದ್ದಾಳೆ. ಈಕೆ ಸಂದೀಪ್ ಶೇಖ‌ರ್ ಮತ್ತು ದಿವ್ಯ ಮೆಲ್ಕಾರ್ ಇವರ ಪುತ್ರಿಯಾಗಿರುತ್ತಾಳೆ.

By Suddi9

Leave a Reply

Your email address will not be published. Required fields are marked *