ಮುಂಬಯಿ: ಎನ್‌ಎಸ್‌ಯುಐ (ಭಾರತ ರಾಷ್ಟ್ರೀಯ ವಿದ್ಯಾಥಿ ಸಂಘ) ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಗಿ ಈಥನ್ ರಫಾಯೆಲ್ ತೌರೊ ಅವರನ್ನು ನೇಮಕ ಮಾಡಲಾಗಿದೆ.

ಎನ್‌ಎಸ್‌ಯುಐ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಸುಹಾನ್ ಆಳ್ವ ಅವರು ಅಧಿಕೃತ ನೇಮಕಾತಿ ಆದೇಶವನ್ನು ಹೊರಡಿಸಿ ಈಥನ್ ತೌರೊ ಅವರನ್ನು ನೇಮಕಾತಿಯನ್ನು ತಿಳಿಸಿದ್ದಾರೆ.
ಗಲ್ಫ್ ರಾಷ್ಟ್ರ, ವಿದೇಶ, ಕರ್ನಾಟಕದ ಕರಾವಳಿಯಲ್ಲಿ ಜನಪ್ರಸಿದ್ಧ ಮಾಧ್ಯಮಮಿತ್ರ ದಾಯ್ಜಿ ಪ್ರವೀಣ್ ನಾಮಾಂಕಿತ ಪ್ರವೀಣ್ ತಾವ್ರೊ ಮತ್ತು ಹೆಸರಾಂತ ಕಾರ್ಯಕ್ರಮ ನಿರೂಪಕಿ ರೆನಿಟಾ ಪಿ.ತಾವ್ರೋ ದಂಪತಿಯ ಏಕೈಕ ಸುಪುತ್ರ, ಬಹುಮುಖಿ ಪ್ರತಿಭೆಯ ಈಥನ್ ಅವರ ಸಮರ್ಪಣೆ, ಯುವ ನಾಯಕತ್ವ ಮತ್ತು ಬದ್ಧತೆಯು ಸಂಘಟನೆಯನ್ನು ಬಲಪಡಿಸಲು ಮತ್ತು ವಿದ್ಯಾಥಿ ಸಮುದಾಯದ ಅಭ್ಯುದಯಕ್ಕೆ ಸೇವೆ ಸಲ್ಲಿಸಲು ವರದಾನವಾಗಲಿದೆ ಎಂಬುದಾಗಿ ಸಂಘಟನೆಯ ಧುರೀಣರು ವಿಶ್ವಾಸ ವ್ಯಕ್ತಪಡಿಸಿದೆ.

 
 

By suddi9

Leave a Reply

Your email address will not be published. Required fields are marked *