ಪೊಳಲಿ: ಸಪ್ತ ದುರ್ಗೆಯರ ಕ್ಷೇತ್ರಗಳಲ್ಲಿ ಒಂದಾಗಿರುವ ಇತಿಹಾಸ ಪ್ರಸಿದ್ದವಾದ ಪೊಳಲಿ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಈ ಬಾರಿ 29 ದಿನಗಳ ಜಾತ್ರೋತ್ಸವದ ಸಂಭ್ರಮ, ಪೊಳಲಿಯ ಜಾತ್ರೋತ್ಸವದ ಪ್ರಯುಕ್ತ ಐದು ದಿನಗಳ ನಡೆಯುವ “ಚೆಂಡು ಉತ್ಸವ” ಅತ್ಯಂತ ಮಹತ್ವವನ್ನುಪಡೆದಿದೆ.ವಾರ್ಷಿಕ ಜಾತ್ರಾ ಮಹೋತ್ಸವದ ಹಿನ್ನಲೆಯಲ್ಲಿ ಕೊಡಿ ಚೆಂಡು ಉತ್ಸವಕ್ಕೆ( ಮೊದಲ ದಿನದ) ಸೋಮವಾರ ದೇವಳದ ಮುಂಭಾಗದಲ್ಲಿರುವ ಗದ್ದೆಯಲ್ಲಿ ಚಾಲನೆ ನೀಡಲಾಯಿತು.ಕೊಡಿ ಚೆಂಡಿ ಉತ್ಸವದ ಬಳಿಕ ರಾತ್ರಿ ದೇವಳದಲ್ಲಿ “ಕುಮಾರ ತೇರು” ಉತ್ಸವವು ನೆರವೇರಿತು.ಎ.10 ರಂದು ಕಡೇಚೆಂಡು ನಡೆಯಲಿದೆ.

ದೇವಳದಿಂದ ಚೆಂಡನ್ನು ಗಾಣಿಗ ಮನೆತನದವರು ಹಿಡಿದುಕೊಂಡು ಬಂದು ಗದ್ದೆಯಲ್ಲಿ ಸಾಂಪ್ರದಾಯಿಕವಾಗಿ ಪ್ರಾರ್ಥಿಸಿ ಫರ್ದ ಖಂಡದವರಿಗೆ ನೀಡಿ ಚೆಂಡನ್ನು ಹಾರಿಸಲಾಗುತ್ತದೆ.
ಚಂಡ,ಮುಂಡರನ್ನು ಸಂಹರಿಸಿದ ಪ್ರತೀಕವಾಗಿಕ್ಷೇತ್ರದಲ್ಲಿ ಚೆಂಡಿನ ಉತ್ಸವ ನಡೆಸಲಾಗುತ್ತಿದೆ ಎಂಬ ಪ್ರತೀತಿ ಇದೆ. ಪೊಳಲಿ ಕ್ಷೇತ್ರದ ಒಂದು ತಿಂಗಳ ಜಾತ್ರೆಯಲ್ಲಿ ಐದುದಿನಗಳ ಚೆಂಡಿನ ಉತ್ಸವ ಜನಪ್ರಿಯವಾಗಿದ್ದು,ನೂರಾರು ಮಂದಿ ಭಕ್ತರು ಇದರಲ್ಲಿ ಉತ್ಸಾಹದಿಂದ ಪಾಲ್ಗೊಂಡು ಪುನೀತರಾಗುತ್ತಾರೆ.

ಈ ಸಂದರ್ಭದೇವಳದ ಪ್ರಧಾನ ಅರ್ಚಕರಾದ ಮಾಧವ ಭಟ್, ಹಿರಿಯ ಪ್ರಧಾನ ಅರ್ಚಕರಾದ ಕೆ. ರಾಮ್ ಭಟ್, ಪರಮೇಶ್ವರ ಭಟ್, ಅರ್ಚಕರಾದ ಪದ್ಮನಾಭ ಭಟ್,ಅನಂತಪದ್ಮನಾಭ ಭಟ್,ಅದರ್ಶಭಟ್ , ದೇವಳದ ಆಡಳಿತ ಮೊಕ್ತೇಸರರಾದ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಮೊಕ್ತೇಸರರಾದ ಚೇರಾ ಸೂರ್ಯ ನಾರಾಯಣ ರಾವ್,ವಿವಿಧ ಗುತ್ತಿನವರು, ಕಾರ್ಯನಿರ್ವಹಣಾಧಿಕಾರಿ ಕೆ.ಪಿ.ಚಂದ್ರಮೋಹನ್ ಹಾಗೂ ದೇವಳದ ಪ್ರಮುಖರು ಸಾವಿರ ಸೀಮೆಯ ಭಕ್ತಾಧಿಗಳು ಉಪಸ್ಥಿತರಿದ್ದರು
