ಬಂಟ್ವಾಳ : ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘ,ಬಿ.ಸಿ.ರೋಡ್  ಇದರ ನೂತನ ಅಧ್ಯಕ್ಷರಾಗಿ ಸಂಕಪ್ಪ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಬಿ.ಸಿ.ರೋಡ್ ನ ಸರಕಾರಿ ನೌಕರರ ಭವನದಲ್ಲಿ ಸಂಘದ ಅಧ್ಯಕ್ಷರಾದ
ಪಿ .ಲೋಕನಾಥ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ‌   ನೂತನ ಪದಾಧಿಕಾರಿಗಳ ಆಯ್ಕೆ  ನಡೆಸಲಾಯಿತು.
 ಉಳಿದಂತೆ ಉಪಾಧ್ಯಕ್ಷರಾಗಿ
ಕೆ.ನಿಲೋಜಿ ರಾವ್,  ಟಿ.ಶೇಷಪ್ಪ ಮಾಸ್ಟರ್,

ಪ್ರಧಾನ ಕಾರ್ಯದರ್ಶಿಯಾಗಿ
ನಾರಾಯಣ ಪೂಜಾರಿ ಎಸ್ ಕೆ, ಜತೆ ಕಾರ್ಯದರ್ಶಿಯಾಗಿ ನಾರಾಯಣ ಎಂ,
ಖಜಾಂಚಿಯಾಗಿ ಜಲಜಾಕ್ಷಿ ಕುಲಾಲ್,
ಸಂಘಟನಾ ಕಾರ್ಯದರ್ಶಿಗಳಾಗಿ
ಜಯರಾಮ ಪೂಜಾರಿ,ಆನಂದ ನಾಯ್ಕ್,
ಜಯಂತ ಶೆಟ್ಟಿ,ಆಂತರಿಕ ಲೆಕ್ಕ ಪರಿಶೋಧಕರಾಗಿ
ಪದ್ಮನಾಭ.ಎಂ ಸದಸ್ಯರುಗಳಾಗಿ
ಸೋಮಪ್ಪ ಬಂಗೇರ, ಬಾಬು ಮಾಸ್ಟರ್, ಮಧುಕರ ಮಲ್ಯ,ಕೃಷ್ಣಪ್ಪ ,ರಾಮಚಂದ್ರ ರಾವ್,ಜಯಾನಂದ ಪೆರಾಜೆ,ಚಂದ್ರಶೇಖರ ಗಟ್ಟಿ, ಲೋಕನಾಥ ಶೆಟ್ಟಿ,  ಸುಧಾ ಜೋಶಿ,ರಾಘವನ್ ನಾಯರ್ ರವನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿ ನೀಲೋಜಿ ರಾವ್ ಸ್ವಾಗತಿಸಿ, ವರದಿ ವಾಚಿಸಿದರು .ಖಜಾಂಚಿ  ಜಲಜಾಕ್ಷಿ ಕುಲಾಲ್ ಲೆಕ್ಕ ಪತ್ರ ಮಂಡಿಸಿದರು .ನೂತನ ಕಾರ್ಯದರ್ಶಿ ನಾರಾಯಣ ಪೂಜಾರಿ ಎಸ್.ಕೆ ವಂದಿಸಿದರು. 

By suddi9

Leave a Reply

Your email address will not be published. Required fields are marked *