ಶ್ರೀ ಕ್ಷೇ. ಧ. ಗ್ರಾ. ಯೋ.ಯಿಂದ ಸಹಾಯಧನ ವಿತರಣೆ
ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಬಂಟ್ವಾಳ ಇದರ ಪುಂಜಾಲಕಟ್ಟೆ ವಲಯದ ಪಿಲಾತಬೆಟ್ಟು ಕಾರ್ಯಕ್ಷೇತ್ರದ ಪ್ರಗತಿಬಂದು ಸ್ವ – ಸಾಯ ಸಂಘದ ಸದಸ್ಯ ಸುಜಾತಾರವರ ಪತಿ ಯೋಗೀಶ್ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಮಂಜೂರಾದ ಕೃಟಿಕಲ್ ಫಂಡ್ ಸಹಾಯದನ 25 ಸಾ.ರೂ.ವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪಿಲಾತಬೆಟ್ಟು ಒಕ್ಕೂಟದ ಅಧ್ಯಕ್ಷ ಗಂಗಾಧರ್, ಪದಾಧಿಕಾರಿ ಯೋಗೀಶ್, ವಲಯ ಮೇಲ್ವಿಚಾರಕಿ ಸವಿತಾ, ಒಕ್ಕೂಟ ಸೇವಾಪ್ರತಿನಿಧಿ ಅಮೃತ ಉಪಸ್ಥಿತರಿದ್ದರು.



