ಬಂಟ್ವಾಳ: ಇಲ್ಲಿನ ಬೈಪಾಸ್ ನಿತ್ಯಾನಂದ ನಗರದಲ್ಲಿರುವ ಶ್ರೀ ಸದ್ಗುರು ನಿತ್ಯಾನಂದ, ಗೋವಿಂದ ಸ್ವಾಮಿ ಮಂದಿರದಲ್ಲಿ 13ನೇ ವಾರ್ಷಿಕ ಶ್ರಾವಣ ಮಾಸದ “ನವದಿನಗಳ ಭಜನಾ ಸಂಕೀರ್ತನೆ”ಗೆ ಚಾಲನೆನೀಡಲಾಯಿತು.

09 ರವರೆಗೆ ನಡೆಯಲಿರುವ ಭಜನಾ ಸಂಕೀರ್ತನೆಗೆ ಮಂದಿರದ ಟ್ರಸ್ಟ್ ಅಧ್ಯಕ್ಷ ದಿನೇಶ್ ಭಂಡಾರಿ ಉದ್ಘಾಟಿಸಿದರು. ಅರ್ಚಕರಾದ ಸತ್ಯನಾರಾಯಣ ಭಟ್ ಇಜ್ಜ, ಜೈದೀಪ್,ಟ್ರಸ್ಟ್ ನ ಪ್ರ.ಕಾರ್ಯದರ್ಶಿ ಹರೀಶ್ ಎಂ.,ಸದಸ್ಯರಾದ ಪ್ರದೀಪ್ ಕಾಂಚನ್, ಸುಕುಮಾರ್, ಯೋಗೀಶ್ ಕುಲಾಲ್, ಅನಿಲ್, ದಿನೇಶ್ ಕುಲಾಲ್ಸದಸ್ಯರು : ಯಶವಂತ್, ಭವಾನಿ ಶಂಕರ ಶೆಟ್ಟಿ ಕಂಚರಗದ್ದೆ ಮೊದಲಾದವರಿದ್ದರು.

ಭಜನಾ ಸಂಕೀರ್ತನೆಗೆ ಮುನ್ನಸ್ವಾಮೀಜಿದ್ವಯರಿಗೆ ಸಂಜೆ “ತುಪ್ಪದ ದೀಪ”ವನ್ನು ಬೆಳಗಿಸಲಾಗುತ್ತಿದೆ,ರಾತ್ರಿ ಮಹಾಪೂಜೆ ನಂತರ ಎಲ್ಲಾ ಭಕ್ತಾಧಿಗಳಿಗೆ “ತೀರ್ಥ ಪ್ರಸಾದ” ಅನ್ನಸಂತರ್ಪಣೆಯು ನಡೆಯುತ್ತಿದೆ.
