ಬಂಟ್ವಾಳ: ಕ್ಯಾoಪ್ಕೋ ಸಂಸ್ಥೆಯ ‘ಸಾಂತ್ವನ’ ಯೋಜನೆಯಡಿಯಲ್ಲಿ ಕ್ಯಾಂಪ್ಕೋ ಮುಡಿಪು ಶಾಖೆಯ ಸಕ್ರೀಯ ಸದಸ್ಯರಾದ ಅರುಣ್ ಡಿಸೋಜ ಅರ್ಬಿ ತೋಟ ಅವರ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗಾಗಿ 50 ಸಾ.ರೂ.ಸಹಾಯಧನದ ಚೆಕ್ ನ್ನು ನಿರ್ದೇಶಕರಾದ ಮಹೇಶ್ ಚೌಟ ಅವರು ಶುಕ್ರವಾರ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕರಾದ ಪ್ರಕಾಶ ಕುಮಾರ್ ಶೆಟ್ಟಿ ಹಾಗೂ ಮುಡಿಪು ಶಾಖೆಯ ವ್ಯವಸ್ಥಾಪಕರಾದ ಮಹೇಶ್ ಉಪಸ್ಥಿತರಿದ್ದರು.
