ಬಂಟ್ವಾಳ:ಪಾಣೆಮಂಗಳೂರಿಗೆ ಸಮೀಪದ ನಂದಾವರ ಚಿಕ್ಕ ಮೇಳದ ಐದನೇ ವರ್ಷದ ಮಳೆಗಾಲದ ಮನೆ,ಮನೆ ಯಕ್ಷಗಾನ ತಿರುಗಾಟಕ್ಕೆ ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಭಾ ಕ್ಷೇತ್ರದಲ್ಲಿ ಗೆಜ್ಜೆಪೂಜೆಯೊಂದಿಗೆ ಚಾಲನೆ ನೀಡಲಾಯಿತು.

ಪ್ರಥಮ ಸೇವೆಯನ್ನು ಕ್ಷೇತ್ರದಲ್ಲಿ ಸಲ್ಲಿಸಿದ ಬಳಿಕ ಭಾಸ್ಕರ ಪೂಜಾರಿ ಸರಪಾಡಿ ಸಾರಥ್ಯದಲ್ಲಿ ತನ್ನ ತಿರುಗಾಟವನ್ನು ಪ್ರಾರಂಭಿಸಿತು. ಈ ಸಂದರ್ಭ ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್, ದೇವಾಲಯದ ಅರ್ಚಕರು ಉಪಸ್ಥಿತರಿದ್ದರು.
