ಸಂಸ್ಕಾರ ಭಾರತಿ ವತಿಯಿಂದ ” ಸಂಸ್ಕಾರ ಸೌರಭ ” ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರಕ್ಕೆ ಚಾಲನೆ
ಬಂಟ್ವಾಳ: ತಾಲೂಕು ಸಂಸ್ಕಾರ ಭಾರತಿ ವತಿಯಿಂದ ಫರಂಗಿಪೇಟೆ ಶ್ರೀ ಆಂಜನೇಯ ದೇವಸ್ಥಾನದ ಆಶ್ರಯದಲ್ಲಿ ” ಸಂಸ್ಕಾರ ಸೌರಭ ” ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರಕ್ಕೆ ಶ್ರೀ ಆಂಜನೇಯ ದೇವಸ್ಥಾನದ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.

ಸಂಸ್ಕಾರ ಭಾರತಿಯ ಜಿಲ್ಲಾಧ್ಯಕ್ಷರಾದ ತಾರಾನಾಥ ಕೊಟ್ಟಾರಿ ತೇವು ರವರು ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಶಾಲಾ, ಕಾಲೇಜುಗಳಲ್ಲಿ ಸಿಗದಂತ ಪಾಠ,ಸಂಸ್ಕಾರ ಗಳು ಈ ರೀತಿಯ ಶಿಭಿರದ ಮೂಲಕ ಸಿಗಲಿದೆ . ಇದು ಮಕ್ಕಳ ಜೀವನಕ್ಕೆ ಒಳ್ಳೆಯ ಅಡಿಪಾಯ ವಾಗಲಿದೆ . ನಿರಂತರ ಚಟುವಟಿಕೆಯಿಂದ ಸಾಧನೆ ಮಾಡಬಹುದಾಗಿದೆ ಎಂದರು.
ಸಂಸ್ಕಾರ ಭಾರತಿ ಬಂಟ್ವಾಳ ತಾಲೂಕು ಬಂಟ್ವಾಳ ತಾಲೂಕು ಸಂಯೋಜಕರಾದ ಅನಿಲ್ ಪಂಡಿತ್ , ಆಂಜನೇಯ ದೇವಸ್ಥಾನದ ಅಧ್ಯಕ್ಷರಾದ ಚಂದ್ರಶೇಖರ ಗಾಂಭೀರ , ಉದ್ಯಮಿ ಧನರಾಜ್ ಶೆಟ್ಟಿ , ಸಾಮಾಜಿಕ ಕಾರ್ಯಕರ್ತ ದಿನೇಶ್ ಶೆಟ್ಟಿ ಕೊಟ್ಟಿಂಜ, ಶಿಬಿರ ಸಂಯೋಜಕಿ ಭುವನೇಶ್ವರಿ ಶೆಟ್ಟಿ , ಬಾಲಗೋಕುಲ ಪ್ರಮುಖರಾದ ಉಮೇಶ್ ವೇದಿಕೆಯಲ್ಲಿದ್ದರು.
ಐದು ದಿನಗಳ ಬೇಸಿಗೆ ಶಿಬಿರದಲ್ಲಿ ಜಿಲ್ಲೆಯ ಉತ್ತಮ ಸಂಪನ್ಮೂಲ ವ್ಯಕ್ತಿ ಗಳಿಂದ ಯೋಗ , ಭಜನೆ ತರಬೇತಿ, ಮುಖವಾಡ ತಯಾರಿ , ಪರಿಸರ ಅಧ್ಯಯನ , ಕುಣಿತ ಭಜನೆ , ಪೇಪರ್ ಕ್ರಾಫ್ಟ್ , ಕ್ರಿಯಾತ್ಮಕ ಚಟುವಟಿಕೆ , ದಿನಚರಿ ಹವ್ಯಾಸ ಮತ್ತಿತರ ಚಟುವಟಿಕೆಗಳು ನಡೆಯಲಿದೆ