Published On: Wed, May 7th, 2025

ಸಂಸ್ಕಾರ ಭಾರತಿ ವತಿಯಿಂದ ” ಸಂಸ್ಕಾರ ಸೌರಭ ” ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರಕ್ಕೆ ಚಾಲನೆ

ಬಂಟ್ವಾಳ: ತಾಲೂಕು ಸಂಸ್ಕಾರ ಭಾರತಿ ವತಿಯಿಂದ ಫರಂಗಿಪೇಟೆ  ಶ್ರೀ ಆಂಜನೇಯ ದೇವಸ್ಥಾನದ ಆಶ್ರಯದಲ್ಲಿ ” ಸಂಸ್ಕಾರ ಸೌರಭ ”   ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರಕ್ಕೆ ಶ್ರೀ ಆಂಜನೇಯ ದೇವಸ್ಥಾನದ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.

ಸಂಸ್ಕಾರ ಭಾರತಿಯ ಜಿಲ್ಲಾಧ್ಯಕ್ಷರಾದ ತಾರಾನಾಥ ಕೊಟ್ಟಾರಿ ತೇವು ರವರು ಶಿಬಿರದ ಉದ್ಘಾಟನೆ  ನೆರವೇರಿಸಿ  ಮಾತನಾಡಿ, ಶಾಲಾ, ಕಾಲೇಜುಗಳಲ್ಲಿ ಸಿಗದಂತ ಪಾಠ,ಸಂಸ್ಕಾರ ಗಳು ಈ ರೀತಿಯ ಶಿಭಿರದ ಮೂಲಕ ಸಿಗಲಿದೆ . ಇದು ಮಕ್ಕಳ ಜೀವನಕ್ಕೆ ಒಳ್ಳೆಯ ಅಡಿಪಾಯ ವಾಗಲಿದೆ . ನಿರಂತರ ಚಟುವಟಿಕೆಯಿಂದ ಸಾಧನೆ ಮಾಡಬಹುದಾಗಿದೆ  ಎಂದರು.


  ಸಂಸ್ಕಾರ ಭಾರತಿ ಬಂಟ್ವಾಳ ತಾಲೂಕು ಬಂಟ್ವಾಳ ತಾಲೂಕು ಸಂಯೋಜಕರಾದ ಅನಿಲ್ ಪಂಡಿತ್ , ಆಂಜನೇಯ ದೇವಸ್ಥಾನದ ಅಧ್ಯಕ್ಷರಾದ ಚಂದ್ರಶೇಖರ ಗಾಂಭೀರ , ಉದ್ಯಮಿ ಧನರಾಜ್ ಶೆಟ್ಟಿ , ಸಾಮಾಜಿಕ ಕಾರ್ಯಕರ್ತ ದಿನೇಶ್ ಶೆಟ್ಟಿ ಕೊಟ್ಟಿಂಜ, ಶಿಬಿರ ಸಂಯೋಜಕಿ ಭುವನೇಶ್ವರಿ ಶೆಟ್ಟಿ , ಬಾಲಗೋಕುಲ ಪ್ರಮುಖರಾದ ಉಮೇಶ್ ವೇದಿಕೆಯಲ್ಲಿದ್ದರು.
   ಐದು ದಿನಗಳ ಬೇಸಿಗೆ ಶಿಬಿರದಲ್ಲಿ ಜಿಲ್ಲೆಯ ಉತ್ತಮ ಸಂಪನ್ಮೂಲ ವ್ಯಕ್ತಿ ಗಳಿಂದ  ಯೋಗ , ಭಜನೆ ತರಬೇತಿ, ಮುಖವಾಡ ತಯಾರಿ , ಪರಿಸರ ಅಧ್ಯಯನ , ಕುಣಿತ ಭಜನೆ , ಪೇಪರ್ ಕ್ರಾಫ್ಟ್ , ಕ್ರಿಯಾತ್ಮಕ ಚಟುವಟಿಕೆ , ದಿನಚರಿ ಹವ್ಯಾಸ ಮತ್ತಿತರ ಚಟುವಟಿಕೆಗಳು ನಡೆಯಲಿದೆ 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter