ಚಾಲಕನ ನಿದ್ದೆ ಮಂಪರು ನಿಂದಾಗಿ ಕಂಟೈನರ್ ಪಲ್ಟಿ, ಪಿಎಲ್ ಡಿ ಬ್ಯಾಂಕ್ ನ ತಡೆಗೋಡೆಗೆ ಹಾನಿ

ಸುಳ್ಯದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಬಳಿ 20 ಅಡಿ ಗಾತ್ರದ ಕಂಟೈನರ್ ಒಂದು ರಸ್ತೆಯಿಂದ ಪಲ್ಟಿಯಾಗಿ ರಸ್ತೆಯ ಪಕ್ಕದ ಪಿಎಲ್ ಡಿ ಬ್ಯಾಂಕ್ ನ ತಡೆಗೋಡೆಗೆ ಅಪ್ಪಳಿಸಿ ತಡೆಗೋಡೆ ಹಾನಿಯಾಗಿದೆ. ಈ ಘಟನೆ ಇಂದು (ಮಾ.6) ಬೆಳಿಗ್ಗೆ ನಡೆದಿದೆ. ರಸ್ತೆಯ ಬದಿಯ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ ಸ್ಕೂಟಿಯೊಂದು ಕಂಟೈನರ್ ಅಡಿಗೆ ಸಿಲುಕಿದೆ ನಜ್ಜುಗುಜ್ಜಾಗಿದೆ. ಇನ್ನು ಅಲ್ಲಿಯಿದ್ದ ರಿಕ್ಷಾ ಚಾಲಕರಿಗೆ ಸಣ್ಣಪುಟ್ಟ ಗಾಯಗಳಿವೆ. ಕಂಟೈನರ್ ಚಾಲಕನ ನಿದ್ದೆ ಮಂಪರು ನಿಂದಾಗಿ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ